ಹೈದರಾಬಾದ್: ಆದಿವಾಸಿ ಬಾಲಕನೊಬ್ಬನನ್ನು ಅಪಹರಿಸಿದ್ದ ಗುಂಪು ಆತನನ್ನು ನಾಲ್ಕು ವರ್ಷಗಳ ಕಾಲ ವೇತನ ನೀಡದೆ ದುಡಿಸಿಕೊಂಡಿದ್ದಲ್ಲದೇ 26 ವರ್ಷದ ಮಹಿಳೆ ಜೊತೆ ಬಲವಂತವಾಗಿ ವಿವಾಹ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾದಿನ ನಲ್ಗೊಂಡಾ ಜಿಲ್ಲೆಯ ಪ್ರಸಾದ್ ಎಂಬ ಬಾಲಕನನ್ನು 2011 ರಲ್ಲಿ ದೇವರಕೊಂಡ ಬಸ್ ನಿಲ್ದಾಣದಿಂದ ಅಪಹರಿಸಲಾಗಿತ್ತು. ಈ ಕುರಿತು ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಬಾಲಕ ಪ್ರಸಾದ್ ನನ್ನು ಅಪಹರಿಸಿದ್ದ ರಾಮುಲು ಎಂಬಾತ ಗುತ್ತಿಗೆದಾರ ವೆಂಕಟೇಶ್ ಎಂಬಾತನ ಸುಪರ್ದಿಗೆ ಒಪ್ಪಿಸಿದ್ದ.
ವಿಜಯವಾಡದ ಕೋತಪೇಟೆಯಲ್ಲಿ ಬಾಲಕನನ್ನು ಜೀತದಾಳಿನಂತೆ ದುಡಿಸಿಕೊಂಡಿದ್ದ ಆರೋಪಿಗಳು ಯಾವುದೇ ವೇತನ ನೀಡುತ್ತಿರಲಿಲ್ಲವೆಂದು ಹೇಳಲಾಗಿದೆ. ಅಲ್ಲದೇ ಬಾಲಕನಿಗೆ ದಿನನಿತ್ಯ ದೈಹಿಕ ಹಿಂಸೆ ನೀಡಲಾಗುತ್ತಿತ್ತೆನ್ನಲಾಗಿದೆ. ಮೂರು ತಿಂಗಳ ಹಿಂದೆ ಈ ಬಾಲಕನ ವಿವಾಹವನ್ನು ಆತನ ವಿರೋಧದ ನಡುವೆಯೂ ಬಲವಂತವಾಗಿ 26 ವರ್ಷದ ಮಹಿಳೆ ಜೊತೆ ನೆರವೇರಿಸಲಾಗಿತ್ತೆನ್ನಲಾಗಿದೆ. ಅವರುಗಳ ಕಪಿಮುಷ್ಟಿಯಿಂದ ಬಾಲಕ ತಪ್ಪಿಸಿಕೊಂಡು ಬಂದಿದ್ದು, ತನ್ನ ಮೇಲಾದ ದೌರ್ಜನ್ಯದ ಕುರಿತು ಈಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾನೆ. ದಾಖಲೆಗಳ ಪ್ರಕಾರ ಬಾಲಕ ಪ್ರಸಾದ್ ನ ಜನ್ಮ ದಿನಾಂಕ ಜುಲೈ 22, 1999 ಎಂದು ತಿಳಿದುಬಂದಿದೆ.
2 Comments
Brave heart …… Interesting story…..
bad story