ರಾಷ್ಟ್ರೀಯ

ಇನ್ನೂ ನಿಗೂಢವಾಗಿದೆ ಈ ಯುವತಿಯರ ಸಾವಿನ ರಹಸ್ಯ

Pinterest LinkedIn Tumblr

3560GIRLS_0ಕೇರಳ: ಜುಲೈ 10 ರಂದು ಕೇರಳದ ಕೊನ್ನಿಯಿಂದ ಕಾಣೆಯಾಗಿದ್ದ ಮೂವರು ಯುವತಿಯರ ಪೈಕಿ ಇಬ್ಬರು ಪಾಲಕ್ಕಾಡ್ ಸಮೀಪ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದರೆ ಮತ್ತೊಬ್ಬಾಕೆ ತೀವ್ರವಾಗಿ ಗಾಯಗೊಂಡು ತ್ರಿಶೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಯುವತಿಯರ ಸಾವಿನ ಕಾರಣ ಇನ್ನೂ ನಿಗೂಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಚೇತರಿಸಿಕೊಂಡ ಬಳಿಕವಷ್ಟೇ ಸ್ಪಷ್ಟ ಕಾರಣ ತಿಳಿಯಲಿದೆ ಎನ್ನಲಾಗಿದೆ. ಜುಲೈ 10 ರಂದು ಅತಿರಾ, ರಾಜಿ ಹಾಗೂ ಆರ್ಯ ಎಂಬ ಈ ಮೂವರು ಯುವತಿಯರು ಕಾಣೆಯಾಗಿದ್ದರು. ಇವರುಗಳ ಶವದ ಬಳಿ ದೊರೆತ ಬ್ಯಾಗಿನಲ್ಲಿ ಬೆಂಗಳೂರು- ನಾಗರಕೋಯಿಲ್ ಎಕ್ಸ್ ಪ್ರೆಸ್ ರೈಲಿನ ಟಿಕೇಟುಗಳು ದೊರೆತಿವೆ. ಅಲ್ಲದೇ ಬೆಂಗಳೂರಿಗೆ ತೆರಳಿದ್ದ ಇವರುಗಳು ಲಾಲ್ ಬಾಗ್ ಗೂ ಭೇಟಿ ನೀಡಿರುವ ಮಾಹಿತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪಕ್ಕದ ಮನೆಯವರೊಬ್ಬರ ಐಡೆಂಟಿಟಿ ಕಾರ್ಡ್ ಬಳಸಿ ಈ ಯುವತಿಯರು ಸಿಮ್ ಕಾರ್ಡ್ ಪಡೆದಿರುವುದೂ ತನಿಖೆ ವೇಳೆ ಬಯಲಾಗಿದೆ. ತಮ್ಮ ಐಡೆಂಟಿಟಿ ಕಾರ್ಡ್ ಬಳಸಿಕೊಂಡಿರುವ ಸಂಗತಿ ಪಕ್ಕದ ಮನೆಯಾಕೆಗೆ ಪೊಲೀಸರು ಕರೆ ಮಾಡಿದ ಬಳಿಕವಷ್ಟೇ ಗೊತ್ತಾಗಿದೆ. ಯಾವ ಕಾರಣಕ್ಕಾಗಿ ಇವರುಗಳು ಬೆಂಗಳೂರಿಗೆ ತೆರಳಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ಏಕೆ ಎಂಬ ಪ್ರಶ್ನೆ ಪೊಲೀಸರಲ್ಲಿ ಈಗ ಮೂಡಿದೆ. ಅತಿರಾ ಹಾಗೂ ರಾಜಿ ಸಾವನ್ನಪ್ಪಿದ್ದರೆ, ಆರ್ಯ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆಂದು ಹೇಳಲಾಗಿದೆ.

Write A Comment