ರಾಷ್ಟ್ರೀಯ

ರಾಮ ಜನ್ಮ ಭೂಮಿ ರಹಸ್ಯ ಬಿಚ್ಚಿಡ್ತಾರಂತೆ ಲಾಲು !!

Pinterest LinkedIn Tumblr

laluಲಾಟೀನು ಹಿಡಿದು ಬಿಹಾರದಲ್ಲಿ ಹಲವು ವರ್ಷಗಳಿಂದ ರಾಜಕೀಯ ನಡೆಸುತ್ತಿರುವ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಇದೀಗ ಪುಸ್ತಕ ಬರೆಯಲು ಮುಂದಾಗಿದ್ದಾರೆ.

ರಾಷ್ಟ್ರೀಯ ಜನತಾ ದಳದ ಕಾರ್ಯಕ್ರಮದಲ್ಲಿ ತಮ್ಮ ಕನಸನ್ನು ಬಿಚ್ಚಿಟ್ಟ ಲಾಲು ಭಾರತದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾದ ಮಂಡಲ್ ಆಂದೋಲನ ಕುರಿತ ರಾಜಕೀಯ ಪುಸ್ತಕವನ್ನು ಬರೆಯಲು ತಾವು ಉತ್ಸುಕರಾಗಿದ್ದು ಇದರಲ್ಲಿ ಬಿಜೆಪಿ ಹಾಗೂ ಇನ್ನಿತರ ಪಕ್ಷಗಳ ನಡೆಸಿದ ರಾಜಕಾರಣ ಹಾಗೂ ರಾಮಜನ್ಮಭೂಮಿ ವಿವಾದದ ಕುತೂಹಲಕಾರಿ ಅಂಶಗಳನ್ನು ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ.

1979ರಲ್ಲಿ ಮೋರಾರ್ಜಿ ದೇಸಾಯಿ ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಅವಲೋಕನ ಮಾಡಲು ರಚಿಸಿದ್ದ ಮಂಡಲ್ ಕಮಿಷನ್ ಬಗೆಗೆ ತಾವು ಈ ಪುಸ್ತಕದಲ್ಲಿ ಸವಿಸ್ತಾರವಾಗಿ ವಿವರಿಸಲಿದ್ದು ಎಲ್ಲರೂ ಈ ಕುರಿತಾಗಿ ಸ್ಪಷ್ಟ ಮಾಹಿತಿ ಪಡೆಯುವಂತಾಗಲಿ ಎಂಬುದೇ  ನನ್ನ ಉದ್ದೇಶ ಎಂದು ವಿವರಿಸಿದರು.

Write A Comment