ಜಮ್ಮು: ವಾರ್ಷಿಕ ಅಮರನಾಥ ಯಾತ್ರೆ ಮಳೆಯಿಂದ ಭಾನುವಾರ ಸ್ಥಗಿತಗೊಂಡಿದೆ. ಉದಮ್ಪುರ ಜಿಲ್ಲೆಯ ಗಂಗರೂವಿನ ರಾಷ್ಟ್ರೀಯ ಹೆದ್ದಾರಿ ಭೂ ಕುಸಿತದಿಂದ ಯಾವುದೇ ಯಾತ್ರಾರ್ಥಿಗಳಿಗೆ ಮುಂದೆ ಕ್ರಮಿಸಲು ಸಾಧ್ಯವಾಗುತ್ತಿಲ್ಲ,’ ಎಂದು ಪೊಲೀಸರು ತಿಳಿಸಿದ್ದಾರೆ.
ಮಳೆಯಿಂದ ಆಸುಪಾಸಿನ ನದಿಗಳ ನೀರಿನ ಮಟ್ಟವೂ ಗಣನೀಯವಾಗಿ ಏರುತ್ತಿದೆ. ಉತ್ತರ ಕಾಶ್ಮೀರದ ಬಲ್ತಾಲ್ ಮತ್ತು ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಶಿಬಿರದಿಂದ ಹೊರಟ ಯಾತ್ರೆಗೆ ಅಡಚಣೆಯಾಗಿದೆ.
ಜುಲೈ 2ರಂದು ಆರಂಭವಾದ ಯಾತ್ರೆ ಆಗಸ್ಟ್ 23ಕ್ಕೆ ಅಂತ್ಯವಾಗುವ ಯಾತ್ರೆಗೆ ಸುಮಾರು 1.5 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ.