ಜಾನ್ಪುರ(ಉ.ಪ್ರ), ಜು.5-ಮಹಿಳಾ ಸಿಬ್ಬಂದಿಯೊಬ್ಬಳನ್ನು ಚುಡಾಯಿಸಿದ ಎಂದು ಜೈಲು ಸಿಬ್ಬಂದಿ ವಿಚಾರಣಾಧೀನ ಖೈದಿಯೊಬ್ಬನನ್ನು ಹೊಡೆದು ಸಾಯಿಸಿದ್ದು, ಇದರಿಂದ ರೊಚ್ಚಿಗೆದ್ದ ಕೈದಿಗಳು ಬಂದೀಖಾನೆ ಅಧಿಕಾರಿ ಮೇಲೆ ನಡೆಸಿದ ಘರ್ಷಣೆಯಲ್ಲಿ 26 ಜನ ಗಾಯಗೊಂಡಿದ್ದಾರೆ. ಶಾಮ್ಕುಮಾರ್ ಯಾದವ್ ಎಂಬ ಖೈದಿ ಮಹಿಳಾ ಗಾರ್ಡ್ ಒಬ್ಬಳನ್ನು ಚುಡಾಯಿಸಿದ್ದು,
ಇದಕ್ಕೆಲ್ಲ ಕಾರಣವಾಯಿತು ಎಂದು ಕಾರಾಗೃಹ ಅಧೀಕ್ಷಕ ಭರತ್ಸಿಂಗ್ ಹೇಳಿದ್ದಾರೆ.
ಸಿಬ್ಬಂದಿಯ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಯಾದವ್ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವನು ಕೊನೆಯುಸಿರೆಳೆದ ಎಂದು ಅವರು ಹೇಳಿದ್ದಾರೆ.