ರಾಷ್ಟ್ರೀಯ

ಅತ್ಯಾಚಾರಿಯ ಹೆಣವನ್ನು ಬೆತ್ತಲೆಗೊಳಿಸಿ ತುಳಿದು ಆಕ್ರೋಶ ವ್ಯಕ್ತಪಡಿಸಿದ ಜನ

Pinterest LinkedIn Tumblr

7413alleged-rapist-body-assaulted-andhra_650x400_51434709033

ಆಂಧ್ರ ಪ್ರದೇಶ: ಅತ್ಯಾಚಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ ಯಾವ ಮಟ್ಟಿಗಿದೆ ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದವನೊಬ್ಬ ಮೃತಪಟ್ಟ ವೇಳೆ ಸಾರ್ವಜನಿಕರು ಆತನ ಶವವನ್ನು ಬೆತ್ತಲೆಗೊಳಿಸಿ ಕಾಲಿನಿಂದ ತುಳಿದು ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ವೇಲೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದಿದ್ದವನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಸೇತುವೆ ಮೇಲಿನಿಂದ ಹಾರಿದಾಗ ರೈಲ್ವೇ ಹಳಿ ಮೇಲೆ ಬಿದ್ದು ಮೃತಪಟ್ಟಿದ್ದ. ಆಗ ಅಲ್ಲಿಗೆ ಧಾವಿಸಿದ ಮೃತ ಬಾಲಕಿಯ ಸಂಬಂಧಿಕರು ಹಾಗೂ ಸಾರ್ವಜನಿಕರು ಆತನ ಶವವನ್ನು ಕಾಲಿನಿಂದ ತುಳಿದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆಗೈದ ಬಳಿಕ ಹೆದರಿದ ಆರೋಪಿ 35 ವರ್ಷದ ಸುರೇಶ್ ಬಸ್ ನಿಲ್ದಾಣದ ಬಳಿ ಅಡಗಿಕೊಂಡಿದ್ದನೆನ್ನಲಾಗಿದೆ. ಆತನನ್ನು ಹಿಡಿಯುವ ವೇಳೆ ಆತ ಸೇತುವೆ ಮೇಲಿನಿಂದ ಬಿದ್ದು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಹೆಸರು ಹೇಳಲಿಚ್ಚಿಸದ ಕೆಲ ಪ್ರತ್ಯಕ್ಷದರ್ಶಿಗಳು ಸಾರ್ವಜನಿಕರೇ ಆತನನ್ನು ಥಳಿಸಿ ಕೊಂದಿದ್ದಾರೆಂದು ಹೇಳಿದ್ದಾರೆ.

Write A Comment