ರಾಷ್ಟ್ರೀಯ

ಅಂಗನವಾಡಿ ಕಾರ್ಯಕರ್ತೆಯ ಸೆರಗೆಳೆದ ಸಚಿವ ..?

Pinterest LinkedIn Tumblr

421729_05_2015-victim_girl_2

ಅಂಗನವಾಡಿಯ ಕಾರ್ಯಕರ್ತೆಯನ್ನು ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ರಾಜ್ಯ ಸಚಿವ ತನ್ನ ಬೆಂಬಲಿಗರ ಜತೆ ಸೇರಿಕೊಂಡು ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದ್ದು, ಈ ಕಾಮುಕ ಸಚಿವನಿಂದ ಅತ್ಯಾಚಾರಕ್ಕೊಳಗಾದ ಯುವತಿ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 15 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಅಂಗನವಾಡಿ ಕಾರ್ಯಕರ್ತೆ ನೀಡಿದ ದೂರಿನ ಪ್ರಕಾರ ಆಕೆ ಶಾಲೆಯ ಬಾಗಿಲು ಮುಚ್ಚಿ ಮನೆಗೆ ಹಿಂತಿರುಗುವಾಗ ಇದ್ದಕ್ಕಿದ್ದಂತೆ ದ್ವಿಚಕ್ರ ವಾಹನದಲ್ಲಿ ಬಂದ ರಾಮಮೂರ್ತಿ ವರ್ಮಾ ಅವರ ಬೆಂಬಲಿಗರು ಏಪ್ರಿಲ್ 19 ರಂದು ರಾಮಮೂರ್ತಿ ಅವರು ಭೇಟಿಯಾಗುವಂತೆ ತಿಳಿಸಿ ಏಕೆಂದು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದದಿಂದ ನಿಂದಿಸಿ ತೆರಳಿದ್ದರು ಎನ್ನಲಾಗಿದೆ.

ತದ ನಂತರ ಏಪ್ರಿಲ್ 30 ರಂದು ನನ್ನ ಮೊಬೈಲ್ ಗೆ ಕರೆಯೊಂದು ಬಂದಿದ್ದು  ಕರೆ ಮಾಡಿದ ವ್ಯಕ್ತಿ ರಾಮಮೂರ್ತಿ ಸಿಂಗ್ ವರ್ಮಾ ಎಂದು ಹೇಳಿದ್ದಲ್ಲದೇ ನಿನ್ನನ್ನು ಕರೆದುಕೊಂಡು ಬರುವಂತೆ ಅಮಿತ್ ಎಂಬಾತನನ್ನು ಕಳುಹಿಸಿದ್ದೆ. ಆದರೆ ನೀನು ಬಂದಿಲ್ಲ ನನ್ನ ಮಾತು ಕೇಳದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ  ಮುಂಬರುವ ದಿನಗಳಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಬೆದರಿಕಿ ಹಾಕಿದ. ಆದರೆ ನಾನು ಈ ಬಗ್ಗೆ ತಲೆಕೆಡಿಕೊಂಡಿರಲಿಲ್ಲ ಎಂದು ತಿಳಿಸಿದ್ದಾಳೆ.

ಆದರೆ ಇದಾದ ಕೆಲವು ದಿನಗಳ ನಂತರ ತಮ್ಮ ಮನೆಗೆ ಬಂದ ಇನ್ಸ್ ಪೆಕ್ಟರ್ ಒಬ್ಬರು ಬಲವಂತವಾಗಿ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹಕ್ಕೆ ಕರೆದೊಯ್ದಿದ್ದು ಅಲ್ಲಿದ್ದ ಸಚಿವ ರಾಮಮೂರ್ತಿ ವರ್ಮಾ ಹಾಗೂ ಇನ್ನಿತರೆ ನಾಲ್ವರು ಬೆಂಬಲಿಗರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು  ಅತ್ಯಾಚಾರ ಪೀಡಿತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

Write A Comment