ಹೊಸದಿಲ್ಲಿ, ಮೇ 27: ನಾನು ಗೋವು ಮಾಂಸ ತಿನ್ನುತ್ತೇನೆ. ನನ್ನನ್ನು ತಡೆಯಲು ಯಾರಿಂದಲಾದರೂ ಸಾಧ್ಯವೇ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರೇಣ್ ರಿಜಿಜು ಪ್ರಶ್ನಿಸಿದ್ದಾರೆ.
ಅವರು ಮಿಝೋರಾಂ ರಾಜಧಾನಿ ಐಜ್ವಾಲ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಗೋಮಾಂಸ ತಿನ್ನುತ್ತೇನೆ. ಏಕೆಂದರೆ ಅದು ನಮ್ಮ ದೇಶದ ಈಶಾನ್ಯ ಭಾಗದ ಜನರ ಆಹಾರ ಪದ್ಧತಿಯಲ್ಲಿ ಮುಖ್ಯವಾಗಿದೆ. ನಾವು ಯಾವುದೇ ವ್ಯಕ್ತಿಯ ಆಹಾರ ಕ್ರಮದಲ್ಲಿ ಹಸ್ತಕ್ಷೇಪಕ್ಕೆ ಮುಂದಾಗುವುದು ಸರಿಯಲ್ಲ ಎಂದು ಹೇಳಿದರು.
’ಗೋಮಾಂಸ ತಿನ್ನದೇ ಬದುಕಲು ಸಾಧ್ಯವಿಲ್ಲ ಎಂದು ಹೇಳುವವರು ಪಾಕಿಸ್ಥಾನಕ್ಕೆ ಹೋಗಲಿ’ ಎಂದು ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಸರ್ವತ್ರ ಟೀಕೆ, ಖಂಡನೆಗೆ ಗುರಿಯಾಗಿದ್ದ ಬಿಜೆಪಿಯ ನಾಯಕ, ರಾಜ್ಯಸಭಾ ಸದಸ್ಯ ಮುಖ್ತಾರ್ ಅಬ್ಟಾಸ್ ನಕ್ವಿ ಅವರ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿರುವ ಅವರು, ನಕ್ವಿ ಅವರ ಹೇಳಿಕೆಯನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ.