ಪತ್ನಿಯ ಮೇಲೆ ಜಗಳ ಕಾಯ್ದ ಪತಿ ಮಹಾಶಯನೊಬ್ಬ ತನ್ನ ಆರು ತಿಂಗಳ ಹಸೂಗೂಸನ್ನೇ ನಾಲೆಗೆ ಎಸೆದು ಕೊಲ್ಲುವ ಮೂಲಕ ತನ್ನ ಕ್ರೌರ್ಯ ಪ್ರದರ್ಶಿಸಿದ್ದಾನೆ.
ಪಂಜಾಬ್ ನ ಬಟಾಲಾದಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ದುನಿಯಾ ಸಂಧು ಎಂಬ ಗ್ರಾಮದಲ್ಲಿ ವಾಸವಾಗಿರುವ ಧರ್ಮೇಂದ್ರ ಸಿಂಗ್ ತನ್ನ ಪತ್ನಿ ಕನ್ವಲ್ಜಿತ್ ಕೌರ್ ಜತೆ ಆಗಾಗ ಜಗಳವಾಡುತ್ತಿದ್ದ. ಕಳೆದ ಮೇ 14ರಂದು ಆರೋಪಿ ತನ್ನ ಪತ್ನಿ ಕನ್ವಲ್ಜಿತ್ ಕೌರ್ ಳನ್ನು ಕೋಪಾವೇಶದಲ್ಲಿ ಹೊಡೆದು ತವರಿಗೆ ಹೋಗುವಂತೆ ಬೆದರಿಸಿದ್ದರೂ ಆಕೆ ಮಾತ್ರ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗಂಡನ ಮನೆಯಲ್ಲೇ ಉಳಿದುಕೊಂಡಿದ್ದಳು.
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಧರ್ಮೇಂದ್ರ ಸಿಂಗ್ ತಾಳ್ಮೆ ಕಳೆದುಕೊಂಡು ತನ್ನ ಆರು ತಿಂಗಳ ಮಗಳನ್ನು ನಾಲೆಗೆ ಎಸೆದು ದಾರುಣವಾಗಿ ಹತ್ಯೆ ಮಾಡಿದ್ದಾನೆ.
ಈ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿ ಧರ್ಮೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸಲು ಹಸುಗೂಸಿನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.