ಗಲ್ಫ್

ದುಬಾಯಿಯಲ್ಲಿ ಯಶ್ವಸ್ವಿಯಾದ ಧ್ವನಿ ಪ್ರತಿಷ್ಠಾನದ ರಂಗ ಪ್ರಯೋಗ “ಮೃಚ್ಛಕಟಿಕ”; “ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ರಂಗಭೂಮಿ ತಪಸ್ವಿ ಗುಂಡಣ್ಣ ಸಿ.ಕೆ. ರವರಿಗೆ ಪ್ರದಾನ

Pinterest LinkedIn Tumblr

ಧ್ವನಿ ಪ್ರತಿಷ್ಠಾನ ತನ್ನ 32 ವರ್ಷ ಯಶಸ್ವಿ ಹೆಜ್ಜೆ ಗುರುತನ್ನು ಮೂಡಿಸಿ 33ನೇ ವರ್ಷಾಚರಣೆಯ ವಿಶೇಷ ಸಂಭ್ರಮಾಚರಣೆಯ ರಂಗ ಪ್ರಯೋಗ ಮೂಲ ಸಂಸ್ಕೃತ ನಾಟಕ ಡಾ. ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ ರವರ ಕನ್ನಡ ಅನುವಾದ “ಮೃಚ್ಛಕಟಿಕ” ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರ ನಿರ್ದೆಶನದಲ್ಲಿ 2019 ಫೆಬ್ರವರಿ 8ನೇ ತಾರೀಕು ಶುಕ್ರವಾರ ಸಂಜೆ 7.00 ಗಂಟೆಗೆ ರಂಗವೇರಿಸಲಾಯಿತು.

ಶ್ರೀಮತಿ ರಂಜನಿ ಕೃಷ್ಣಪ್ರಸಾದ್ ಮತ್ತು ಅಕ್ಷತಾ ಆಚಾರ್ಯ ರವರಿಂದ ಭರತನಾಟ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

“ರಂಗ ಸಿರಿ ಉತ್ಸವ – 2019 ” ಕಾನ್ಸುಲ್ ಜನರಲ್ ದುಬಾಯಿ – ಗೌರವಾನ್ವಿತ ಶ್ರೀ ವಿಪುಲ್ ರವರಿಂದ ಉದ್ಘಾಟನೆ
ಮುಖ್ಯ ಅತಿಥಿಯಾಗಿ ಆಗಮಿಸಿದ ಕಾನ್ಸುಲೇಟ್ ಜನರಲ್ ದುಬಾಯಿ ಗೌರವಾನ್ವಿತ ಶ್ರೀ ವಿಪುಲ್ “ರಂಗ ಸಿರಿ ಉತ್ಸವ 2109 ” ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಗೌರವ ಅತಿಗಳಾಗಿ ಕನ್ನಡ ಚಲನ ಚಿತ್ರ ರಂಗದ ಪ್ರಖ್ಯಾತ ಹತ್ತು ಬಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿರುವ ಪಿ. ಶೇಷಾದ್ರಿ, ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಉಪಕುಲಪತಿಗಳಾದ ಪ್ರೋ ಎಂ. ವೆಂಕಟರಮಣ ಹಾಗೂ “ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ಪುರಸ್ಕೃತ ರಂಗಭೂಮಿ ತಪಸ್ವಿ ಶ್ರೀ ಗುಂಡಣ್ಣ ಸಿ.ಕೆ. ಮತ್ತು ಪ್ರಮುಖ ಪ್ರಾಯೋಜಕರು ಗಳಾದ ಶ್ರೀ ಗುಣಶೀಲ್ ಶೆಟ್ಟಿ. ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಶ್ರೀ ಹರೀಶ್ ಶೇರಿಗಾರ್ ಉಪಸ್ತಿತರಿದ್ದರು.

ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರು ಸರ್ವರನ್ನು ಸ್ವಾಗತಿಸಿದರು.

ಗೌರವಾನ್ವಿತ ಶ್ರೀ ವಿಪುಲ್ ರವರಿಗೆ ಧ್ವನಿ ಪ್ರತಿಷ್ಠಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

“ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ರಂಗಭೂಮಿ ತಪಸ್ವಿ ಶ್ರೀ ಗುಂಡಣ್ಣ ಸಿ. ಕೆ. ರವರಿಗೆ ಪ್ರದಾನ
ನಾಲ್ಕು ದಶಕಗಳಿಂದ ಕನ್ನಡ ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ರಂಗಭೂಮಿ ತಪಸ್ವಿ ಶ್ರೀ ಗುಂಡಣ್ಣ ಸಿ.ಕೆ. ರವರಿಗೆ “ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿಯನು ಸ್ವೀಕರಿಸಿದ ಗುಂಡಣ್ಣರವರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿ ವಿದೇಶದ ಮಣ್ಣಿನಲ್ಲಿ ಕನ್ನಡ ರಂಗಭೂಮಿಯ ಪ್ರಯೋಗವನ್ನು ಹಲವಾರು ವರ್ಷಗಳಿಂದ ಶಿಸ್ತುಭದ್ಧವಾಗಿ ನಡೆಸಿಕೊಂಡು ಬರುತ್ತಿರುವ ಧ್ವನಿ ಪ್ರತಿಷ್ಠಾನಕ್ಕೆ ಶುಭವನ್ನು ಹಾರೈಸಿದರು.

ಗೌರವ ಅತಿಗಳಾಗಿ ಕನ್ನಡ ಚಲನ ಚಿತ್ರ ರಂಗದ ಪ್ರಖ್ಯಾತ ಹತ್ತು ಬಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿರುವ ಪಿ. ಶೇಷಾದ್ರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದೇಶಲ್ಲಿ ಕನ್ನಡ ಭಾಷೆಯನ್ನು ವೈಭವೀಕರಿಸಿ ಕನ್ನಡ ಭಾಷೆಯನ್ನು ಶ್ರೀಮಂತವಾಗಿರಿಸಿರುವ ಧ್ವನಿ ಪ್ರತಿಷ್ಠಾನಕ್ಕೆ ತಮ್ಮ ಮೆಚ್ಚುಗೆಯನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.

ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಉಪಕುಲಪತಿಗಳಾದ ಪ್ರೋ ಎಂ. ವೆಂಕಟರಮಣರವರನ್ನು ಸನ್ಮಾನಿಸಿ ಗೌರವಿಸಲಾಯಿತು.

2018ನೇ ಸಾಲಿನ ಅಂತಾರಾಷ್ಟ್ರೀಯ “ಧ್ವನಿ ಪುರಸ್ಕಾರ” ಶ್ರೀಮತಿ ಗೋಪಿಕಾ ಮಯ್ಯರವರಿಗೆ ಪ್ರದಾನ
ಕನ್ನಡ ರಂಗಭೂಮಿಗೆ ಹಾಗು ಮಾದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ 2018ನೇ ಸಾಲಿನ ಅಂತಾರಾಷ್ಟ್ರೀಯ “ಧ್ವನಿ ಪುರಸ್ಕಾರ” ಪ್ರಶಸ್ತಿಯನ್ನು ಶ್ರೀಮತಿ ಗೋಪಿಕಾ ಮಯ್ಯರವರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಧ್ವನಿ ಪ್ರತಿಷ್ಠಾನದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಜೊತೆ ಜೊತೆಯಾಗಿ ಭಾಗವಹಿಸಿಕೊಂಡು ಬಂದಿರುವ ಗೋಪಿಕಾ ಮಯ್ಯ ರವರು ಧ್ವನಿ ರಂಗ ಪ್ರಯೋಗಗಳಲ್ಲಿ ಏಳು ಎಂಟು ನಾಟಕಗಳಲ್ಲಿ ನಾಯಕಿ ನಟಿಯಾಗಿ ಪ್ರಮುಖ ಪಾತ್ರದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯತೆಯನ್ನು ಪಡೆದಿರುವವರು,

ಧ್ವನಿ ಪ್ರತಿಷ್ಠಾನದ ಪ್ರಮುಖ ಪ್ರಾಯೋಜಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪ್ರಾರಂಭದಲ್ಲಿ ಪ್ರಾರ್ಥನೆ ರಮ್ಯ ಜಾಗಿರ್ದಾರ್, ಕಾರ್ಯಕ್ರಮ ನಿರೂಪಣೆಯನ್ನು ಅಚ್ಚುಕಟ್ಟಾಗಿ ಶ್ರೀಮತಿ ಶ್ವೇತಾ ನಾಡಿಗ್ ಮತ್ತು ಸಹನಾ ಕುಲಕರ್ಣಿ ನೆರವೇರಿಸಿಕೊಟ್ಟರು

ಸಭಾಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಲತಾ ಹೆಗ್ಡೆಯವರು ವಂದಾರ್ಪಣೆಯನ್ನು ಸಲ್ಲಿಸಿದರು.

ಸಭಾಂಗಣ ಭರ್ತಿಯಾಗಿದ್ದ ಪ್ರೇಕ್ಷಕರ ಮನ ಗೆದ್ದ ರಂಗ ಪ್ರಯೋಗ “ಮೃಚ್ಛಕಟಿಕ”
ದುಬಾಯಿಯ ರಂಗ ವೇದಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಖ್ಯಾತ ನಾಟಕಗಳನ್ನು ಧ್ವನಿ ಪ್ರತಿಷ್ಠಾನ ಯಶಸ್ವಿಯಾಗಿ ರಂಗವೇರಿಸಿಕೊಂಡು ಬರುತ್ತಿದೆ.. ಈ ಎಲ್ಲಾ ನಾಟಕಗಳಿಗೆ ಅಪಾರ ಆಸಕ್ತಿಯ ಪ್ರೇಕ್ಷಕವರ್ಗ ಸಾಕ್ಷಿಕರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿಯೂ ಸಭಾಮ್ಗಣ ಭರ್ತಿಯಾಗಿ ನಾಟಕ ಕೊನೆಯ ಹಂತದವರೆಗೂ ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ದುಬಾಯಿಯ ಯಾಂತ್ರಿಕ ಬದುಕಿನ ನಡುವಿನಲ್ಲಿಯೂ ತಮ್ಮ ಹೆಚ್ಚಿನ ಅಮೂಲ್ಯ ಸಮಯವನ್ನು ರಂಗ ತಾಲಿಮು ನಡೆಸಲು ಸ್ಥಳಿಯ ಪ್ರತಿಭೆಗಳು ವಿನಿಯೋಗಿಸಿಕೊಂಡು ತಮ್ಮ ಅದ್ಭುತ ಅಭಿನಯದೊಂದಿಗೆ ವೇದಿಕೆಯಲ್ಲಿ ಪ್ರಸ್ತುತಪಡಿಸಿ ಕಥಾಹಂದರದಲ್ಲಿ ಪ್ರತಿಯೊಂದು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇತ್ತಿಚಿನ ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಿಗೆ ಮನ ಸೋತಿರುವ ವೀಕ್ಷರಿರುವ ಈ ನವ್ಯ ಯುಗದಲ್ಲಿಯೂ “ಧ್ವನಿ ಪ್ರತಿಷ್ಠಾನ” ಅಧುತ ತಂತ್ರಜ್ಞಾನವನ್ನು ಬಳಸಿ ರಂಗವಿನ್ಯಾಸ, ಬೆಳಕಿನ ವ್ಯವಸ್ಥೆ, ಸಂಗೀತ ಸಂಯೋಜನೆ, ಹಿನ್ನೆಲೆ ಧ್ವನಿ, ಕ್ಷಣಾರ್ಧದಲ್ಲಿ ದೃಶ್ಯಕ್ಕೆ ತಕ್ಕಂತೆ ರಂಗ ಪರಿಕರಗಳನ್ನು ಬದಲಿಸುವ ಪರದೆಯ ಹಿಂಬದಿಯ ತಂಡ ಇವೆಲ್ಲಾವೂ ಅಪಾರ ಅನುಭವಿರುವ ರಂಗ ನಿರ್ದೇಶಕ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರ ನಿರ್ದೇಶನಕ್ಕೆ ಸಾಕ್ಷಿಯಾಗಿತ್ತು.

ನಟನಾ ವರ್ಗದಲ್ಲಿ : ಆರತಿ ಆಡಿಗ, ವಾಸು ಬಾಯರು, ಪ್ರಭಾಕರ್ ಕಾಮತ್, ನಾಗಭೂಷಣ್ ಕಶ್ಯಪ್, ಸಪ್ನಾ ಕಿರಣ್, ಅಶೋಕ್ ಅಂಚನ್, ರುದ್ರಯ್ಯ ನವೆಲಿ ಹಿರೆಮಠ್, ಆದೇಶ್ ಹಾಸನ, ಗುರುರಾಜ್ ಪುತ್ತೂರು, ಹರೀಸ್ ಪೂಜಾರಿ, ಜಾನೆಟ್ ಸಿಕ್ವೇರಾ, ಜಯಂತ್ ಶೆಟ್ಟಿ, ಕೃಷ್ಣ ಕುಮಾರ್, ಮೋಹನ್ ಬಿ.ಪಿ., ನರಸಿಂಹನ್ ಜಿ.ಎಸ್. ಜೇಶ್ ಬಾಯಾರ್, ರಮೇಶ್ ಲಕ್ಯ, ಸಾನ್ವಿ ಪ್ರಕಾಶ್ ಶರ್ಮಾ, ಸಂದೀಪ್ ದೇವಾಡಿಗ, ಸಂಧ್ಯ ರವಿಕುಮಾರ್, ಶ್ವೇತಾ ನಾಡಿಗ್ ಶರ್ಮಾ, ವೆಂಕಟೇಶ್ ರಾವ್, ವಿನಾಯ್ಕ ಹೆಗ್ಡೆ, ದೀಪಾ ಮರಿಯಾ, ಶೋಬಿತಾ ಪ್ರೇಂಜೀತ್,

ಸಂಗೀತಾ ಸಂಯೋಜನೆ : ಅರುಣ್ ಕಾರ್ಲೋ, ಬೆಳಕಿನ ವ್ಯವಸ್ಥೆ : ಅರುಣ್ ಮಣಿಪಾಲ್,

ರಂಗ ವಿನ್ಯಾಸ : ಬಿ. ಕೆ. ಗಣೇಶ್ ರೈ, ಡಿಜಿಟಲ್ ಡಿಸ್ಪ್ಲೇ : ನವೀನ್ ಸಿಕ್ವೇರಾ. ತಬಲಾ ರಾಜೇಶ್ ಆಡಿಗ,

ತೆರೆಯ ಹಿಂದಿನ ರುವಾರಿಗಳು : ಸತೀಶ್ ಹೆಗ್ಡೆ, ಅಶೋಕ್ ಬೈಲೂರ್, ರಿತೇಶ್ ಅಂಚನ್, ಅನಿಲ್ ಪೂಜಾರ, ಸಂತೋಶ್ ಪೂಜಾರಿ, ಗಣೇಶ್ ಕುಲಾಲ್, ಉದಯ ನಂಜಪ್ಪ, ಸಾಯಿ ಮಲ್ಲಿಕಾ, ಲತಾ ಹೆಗ್ಡೆ.

ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ “ಮೃಚ್ಛಕಟಿಕ” ಅಂತಿಮ ಭಾಗದಲ್ಲಿ ನಟನಾ ತಂಡ, ತಾಂತ್ರಿಕ ವರ್ಗದವರಿಗೆ ಗೌರವ ಅತಿಥಿಗಳ ಸಮ್ಮುಖದಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಬಿ. ಕೆ. ಗಣೇಶ್ ರೈ
ಯು.ಎ.ಇ.

Comments are closed.