ಫೋಟೋ: ಅಶೋಕ್ ಬೆಳ್ಮಣ್
ದುಬೈ, ನ.28: ಕವಿ, ಸಾಹಿತಿ ಹಾಗೂ ದುಬೈ ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಕಾಶ್ ರಾವ್ ಪಯ್ಯರ್ರ ‘ನನ’ ತುಳು ಅಲ್ಬಂ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವು ಶುಕ್ರವಾರದಂದು ದುಬೈಯ ಇಂಡಿಯನ್ ಕ್ಲಬ್ನಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುಎಇ ಎಕ್ಸ್ಚೆಂಜ್ನ ಸುಧೀರ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ ಹಾಗೂ ದೈಜಿವರ್ಲ್ಡ್ನ ವಾಲ್ಟರ್ ನಂದಳಿಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಆಲ್ಪಂನ್ನು ಬಿಡುಗಡೆಗೊಳಿಸಿದರು.
ಲೇಖಕರಾದ ಗಣೇಶ್ ರೈ ಹಾಗೂ ಮನೋಹರ್ ತೋನ್ಸೆ ಆಲ್ಪಂನ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಯುಎಇಯ ಹಲವಾರು ಗಣ್ಯರು, ಸಂಘಟಕರು ಉಪಸ್ಥಿತರಿದ್ದರು. ವಿನಯ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.