ಫೋಟೋ: ಅಶೋಕ್ ಬೆಳ್ಮಣ್
ದುಬೈ, ನ.21: ಇಲ್ಲಿನ ದುಬೈ ಗ್ರಾಂಡ್ ಬೈ ಫೋರ್ಚುನ್ ಹೊಟೇಲ್ನ ಸಭಾಂಗಣದಲ್ಲಿ 12ನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಹಾಗೂ 60ನೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಶಾರ್ಜಾ ಕರ್ನಾಟಕ ಸಂಘ ಹಾಗೂ ಹೃದಯ ವಾಹಿನಿ ಕರ್ನಾಟಕ ಇವರ ಆಶ್ರಯದಲ್ಲಿ ನಡೆದ 12ನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಮೊದಲ ದಿನದ ಉದ್ಘಾಟನೆಯನ್ನು ಸಮ್ಮೇಳನದ ಅಧ್ಯಕ್ಷ, ಹಿರಿಯ ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಶಾಸಕ ಮೊಯ್ದಿನ್ ಬಾವಾ, ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಮಲಯ ಶಾಂತಮುನಿ ಸ್ವಾಮೀಜಿ, ಕನ್ನಡ ಸಿನೆಮಾ ನಟ ಸಾಧುಕೋಕಿಲಾ, ಫೋರ್ಚುನ್ ಗ್ರೂಪ್ ಆಫ್ ಹಂಟೇಲ್ಸ್ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಚಿಲಿವಿಲಿಯ ಸತೀಶ್ ವೆಂಕಟರಮಣ, ಹೃದಯ ವಾಹಿನಿಯ ಮಂಜುನಾಥ್ ಸಾಗರ್, ಮಾರ್ಕ್ ಡೆನ್ನಿಸ್ ಸುಗಂಧರಾಜ್ ಬೇಕಲ್ ಹಾಗು ಅನಂತ ರಾಮನ್ ಹಾಜರಿದ್ದರು.
ಈ ಸಂದರ್ಭದಲ್ಲಿ ನಡೆದ ಹನಿಗವನ ಗೋಷ್ಠಿಯ ಅಧ್ಯಕ್ಷತೆಯನ್ನು ಬಿ. ಆರ್.ಲಕ್ಷ್ಮಣ್ ರಾವ್ ವಹಿಸಿದ್ದರು. ಹನಿಗವನ ಗೋಷ್ಠಿಯಲ್ಲಿ ಇರ್ಷಾದ್ ಮೂಡಬಿದ್ರಿ – ದುಬೈ, ಆರತಿ ಘಟಿಕಾರ್ – ದುಬೈ, ಬಿಂಡಿಗನವಿಲೆ ಭಗವಾನ್ – ಬೆಂಗಳೂರು, ಪ್ರಿಯಾ ಹರೀಶ್ – ಮಂಗಳೂರು, ಯಾಕುಬ್ ಖಾದರ್ – ಗುಲ್ವಾಡಿ ಭಾಗವಹಿಸಿದ್ದರು.