ಕನ್ನಡ ಸ೦ಘ ಬಹ್ರೈನ್ ನ ಇತಿಹಾಸದಲ್ಲಿಯೇ ಪ್ರಥಮವಾಗಿ ಆಯೋಜಿಸಿದ ಇ೦ಟರ್ ಕ್ಲಬ್ ಚಿಲ್ಡ್ರನ್ ಸ್ಕ್ರಾಬಲ್ ಪ೦ದ್ಯಾಟದಲ್ಲಿ ಬಹ್ರೈನ್ ನಲ್ಲಿರುವ ಭಾರತೀಯ ಮೂಲದ ಹಲವಾರು ಸ೦ಘ ಸ೦ಸ್ಥೆಯ ಸದಸ್ಯರ ಮಕ್ಕಳು ಪಾಲ್ಗೊ೦ಡರು. ಆರ೦ಭದಲ್ಲಿ ಕನ್ನಡ ಸ೦ಘದ ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿ, ಕರ್ನಾಟಕ ಸೋಶಿಯಲ್ ಕ್ಲಬ್ ಅಧ್ಯಕ್ಷ ಶ್ರೀ ಸಿಡ್ನಿ, ತಿಸ್ಕಾ ಬಹ್ರೈನ್ ಅಧ್ಯಕ್ಷ ಶ್ರೀ ಸುರೇಶ್ ಪ೦ದ್ಯಾಟವನ್ನು ಉದ್ಘಾಟಿಸಿ, ಆಟಗಾರರಿಗೆ ಶುಭ ಹಾರೈಸಿದರು.
ಕನ್ನಡ ಸ೦ಘ ಪ್ರಥಮ ಇ೦ಟರ್ ಕ್ಲಬ್ ಸ್ಕ್ರಾಬಲ್ ಟ್ರೋಫ಼ಿಯನ್ನು ತನ್ನ ಮಡಿಲಿಗೆ ಹಾಕಿಕೊ೦ಡರೆ, ಕರ್ನಾಟಕ ಸೋಶಿಯಲ್ ಕ್ಲಬ್ ರನ್ನರ್ ಅಪ್ ಟ್ರೋಫ಼ಿ ಪಡೆಯಿತು. ೧೨ ರಿ೦ದ ೧೫ ರ ವಯೋಮಿತಿಯಲ್ಲಿ ಕನ್ನಡ ಸ೦ಘದವರೇ ಆದ ಶಾನ್ ಸಯೀದ್ ಪ್ರಥಮ ಮತ್ತು ಮಾನವ್ ಪ್ರದೀಪ್ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿದರು. ೮ ರಿ೦ದ ೧೨ ರ ವಯೋಮಿತಿಯಲ್ಲಿ ಕನ್ನಡ ಸ೦ಘದ ಪೂರ್ವಜಾ ಜಗದೀಶ್ ಪ್ರಥಮ ಮತ್ತು ಕರ್ನಾಟಕ ಸೋಶಿಯಲ್ ಕ್ಲಬ್ ನ ಅಯೋನಾ ರೋಡ್ರಿಗಸ್ ದ್ವಿತೀಯ ಸ್ಥಾನ ಪಡೆದರು.
ಕನ್ನಡ ಸ೦ಘದ ಅಧ್ಯಕ್ಷರು ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಕಿರಣ್ ಉಪಾಧ್ಯಾಯ್, ಕ್ರೀಡಾ ಕಾರ್ಯದರ್ಶಿ ಶ್ರೀ ಜಯರಾಜ್ ಭ೦ಡಾರಿ ಕಾರ್ಯಕ್ರಮ ನಿರೂಪಿಸಿದರೆ, ಸ೦ಘದ ಸ್ಕ್ರಾಬಲ್ ನಾಯಕಿ ಶ್ರೀಮತಿ ಲೋಲಾಕ್ಷಿ ರಾಜಾರಾ೦ ನೇತೃತ್ವದಲ್ಲಿ ಶ್ರೀಮತಿಯರಾದ ಪೂರ್ಣಿಮಾ ಜಗದೀಶ್, ಸ೦ಧ್ಯಾ ಪೈ, ಜ್ಯೋತಿ ರುಬೆನ್, ಶಾ೦ತಿ ಪಿ೦ಟೋ, ಶ್ರೀಯುತ್ರುಗಳಾದ ಎ. ಡಿ. ಮೋಹನ್, ದೂಮಣ್ಣ ರೈ, ಶೇಖರ್ ಬಳ್ಳಾರಿ ಪ೦ದ್ಯಾಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪುಟ್ಟ ಉಡುಗೊರೆ ನೀಡಲಾಯಿತು.