ದಮಾಮ್: ಕರ್ನಾಟಕ ರಾಜ್ಯಾದ್ಯಂತ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ (ಎಸ್ಡಿಪಿಐ) ಬೆಂಬಲಿತ ಸದಸ್ಯರಿಗೆ ಇಂಡಿಯನ್ ಸೋಶಿಯಲ್ ಫೋರಮ್ (ಐಎಸ್ಎಫ್) ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯ ಘಟಕವು ಅಭಿನಂದನೆಯನ್ನು ಸಲ್ಲಿಸಲ್ಲಿಸಿದೆ.
ಗ್ರಾ.ಪಂ.ಚುನಾವಣೆಯಲ್ಲಿ ಜನರು ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸಿರುವುದು ತಮ್ಮ ಸಮಸ್ಯೆಗಳ ಪರಿಹಾರದ ನಿರೀಕ್ಷೆಯಿಂದಾಗಿರುತ್ತದೆ. ಈ ಗೆಲುವು ದೇಶದ ರಾಜಕೀಯ ಬದಲಾವಣೆಗೆ ಮುನ್ನುಡಿ ಆಗಿರುತ್ತದೆ. ಗ್ರಾ.ಪಂ.ಚುನಾವಣೆಯಲ್ಲಿ ದೊರೆತಿರುವ ಅಭೂತಪೂರ್ವ ಗೆಲುವು ಎಸ್ಡಿಪಿಐ ಪಕ್ಷದ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಹಲವು ಕಡೆಗಳಲ್ಲಿ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಕೂದಲೆಳೆಯ ಅಂತರದಲ್ಲಿ ಎರಡನೆ ಸ್ಥಾನ ಪಡೆದಿರುವುದು ಕೂಡ ಪಕ್ಷದ ಗೆಲುವು ಎಂದೇ ಭಾವಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳಿಗೆ ಕೂಡ ಇಂಡಿಯನ್ ಸೋಶಿಯಲ್ ಫೋರಮ್ ಅಭಿನಂದನೆಗೆ ಸಲ್ಲಿಸುತ್ತದೆ. ಚುನವಾಣೆಗಾಗಿ ಹಗಲಿರುಳು ಶ್ರಮಿಸಿದ ಎಸ್ಡಿಪಿಐ ಕಾರ್ಯಕರ್ತರಿಗೂ, ಮತದಾರರಿಗೂ ಇಂಡಿಯನ್ ಸೋಶಿಯಲ್ ಫೋರಮ್ ಅಭನಂದನೆ ಸಲ್ಲಿಸುತ್ತದೆ. ಗ್ರಾಮ ಪಂಚಾಯತ್ಗಳಲ್ಲಿ ಸ್ಪರ್ಧಿಸುತ್ತಿರುವ ಎಸ್ಡಿಪಿಐ ಬೆಂಬಲಿತ ಸದಸ್ಯರ ವಿವರಗಳನ್ನು ಪಡೆದು, ಈಸ್ಟರ್ನ್ ಪ್ರೊವಿನ್ಸ್ನ ದಮಾಮ್, ಜುಬೈಲ್, ಖೋಬರ್, ಅಲ್ಹಸ ಮುಂತಾದ ಕಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಎಸ್ಡಿಪಿಐ ಬೆಂಬಲಿತ ಸದಸ್ಯರಿಗೆ ಮತ ನೀಡುವಂತೆ ಮನವೊಲಿಸುವಲ್ಲಿ ಸಹಕರಿಸಿದ ಎಲ್ಲ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಿಗೂ ರಾಜ್ಯ ಸಮಿತಿಯು ಕತಜ್ಞತೆಗಳನ್ನು ಸಲ್ಲಿಸಲ್ಲಿಸಿದೆ.