ದುಬೈ, ಜ.4: ‘ತುಳು ಪಾತೆರ್ಗ ತುಳು ಒರಿಪಾಗ’ ಫೇಸ್ಬುಕ್ ತಂಡವು ಜನ.2ರಂದು ಮೂರನೆ ವರ್ಷದ ಹಿನ್ನೆಲೆಯಲ್ಲಿ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.
ಯುಎಇಯ ವಿವಿಧ ಕನ್ನಡ, ತುಳುಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ರಕ್ತದಾನ ಮಾಡಿದರು. ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಬಾಲಕೃಷ್ಣ ಸಾಲ್ಯಾನ್ ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.