ಕನ್ನಡ ವಾರ್ತೆಗಳು

ಕುಂದಾಪುರ(ನೇರಳಕಟ್ಟೆ): ಅಡಿಕೆ ವ್ಯಾಪಾರಿ ಆತ್ಮಹತ್ಯೆ; ಕಾರಣ ನಿಗೂಢ

Pinterest LinkedIn Tumblr

ಕುಂದಾಪುರ: ಕಳೆದ ಹಲವು ವರ್ಷಗಳಿಂದ ಅಡಿಕೆ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಕುಂದಾಪುರ ತಾಲೂಕಿನ ನೇರಳಕಟ್ಟೆ ದೇವಸ್ಥಾನದ ಸಮೀಪದ ನಿವಾಸಿ ಶ್ರೀಪತಿ ಬಾಳಿಗಾ(೪೦) ಮನೆ ಸಮೀಪದ ಅಡಿಕೆ ದಾಸ್ತಾನು ಕೊಠಡಿ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

Kundapura_Man_Suside

ಕಳೆದ ಎರಡು ದಶಕಗಳಿಮದ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಶ್ರೀಪತಿ ಬಾಳಿಗ ಸ್ಥಳೀಯವಾಗಿ ಎಲ್ಲರ ಜೊತೆ ಅನ್ಯೋನ್ಯವಾಗಿದ್ದರು. ಆದರೆ ಹದಿನೈದು ದಿನಗಳಿಂದ ಅವರು ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ ಎನ್ನಲಾಗುತ್ತಿದೆ.

ಶ್ರೀಪತಿ ಬಾಳಿಗರಿಗೆ ವ್ಯವಹಾರ ಸಂಬಂಧ ಬಹಳಷ್ಟು ಹಣ ಬರಲು ಬಾಕಿಯಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment