ಮಂಗಳೂರು : ಕೃಷ್ಣಾಪುರ ಐದನೇ ವಾರ್ಡ್ ಸಮಿತಿಯ ಬಿ.ಜೆ.ಪಿ ಅಧ್ಯಕ್ಷ ಭರತ ರಾಜ ( 26) ಎಂಬವರ ಮೇಲೆ ದುಷ್ಕರ್ಮಿಗಳ ತಂಡವೊಂದು ಕೊಲೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ಸುರತ್ಕಲ್ ಸಮೀಪದ ಕೃಷ್ಣಾಪುರ ಮಠದ ರಸ್ತೆ ಬಳಿ ನಡೆದಿದೆ.
ಕೃಷ್ಣಾಪುರ ಮಠದ ರಸ್ತೆಯಲ್ಲಿ ಭರತ ರಾಜ್ ಬೈಕ ಚಲಾಯಿಸಿ ಕೂಂಡು ಮನೆಯತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಸ್ಕಾರ್ಪಿಯೋ ಕಾರೊಂದು ಇವರನ್ನು ಹಿಂಬಾಲಿಸಿಕೊಂಡು ಬಂದು ಇವರ ಬೈಕಿಗೆ ಡಿಕ್ಕಿ ಹೊಡೆದು ನೆಲಕೆ ಬೀಳಿಸಿದೆ. ತಕ್ಷಣ ಕಾರಿನಲ್ಲಿದ್ದ ಐವರು ಅಪರಿಚಿತ ದುಷ್ಕರ್ಮಿಗಳು ತಲವಾರುಗಳನ್ನು ಬೀಸಿ ಭರತ್ ರಾಜ್ ಮೇಲೆಗೆ ಹಲ್ಲೆಗೆ ಯತ್ನಿಸಿದೆ. ತಕ್ಷಣ ಭರತ್ ರಾಜ್ ಅಲ್ಲಿಂದ ಓಡಿದಾಗ ತಂಡ ಆಟಿಸಿಕೊಂಡು ಬಂದಾಗ ಭರತ್ ರಾಜ್ ಅಲ್ಲೆ ಸಮೀಪದ ಗಣೇಶ್ ಎಂಬವರ ಮನೆಯೊಳಗೆ ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಸಂದರ್ಭ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾಗುವ ವೇಳೆ ಇವರ ಸ್ಕಾರ್ಪಿಯೋ ಕಾರು ಕೈಕೊಟ್ಟಿದ್ದು, ಆರೋಪಿಗಳು ಕಾರನ್ನು ಅಲ್ಲೆ ಬಿಟ್ಟು ಓಡಿದ್ದಾರೆ.ಭರತ್ ರಾಜ್ ಸ್ನೇಹಿತರು ಕಾರನ್ನು ಪೊಲೀಸರಿಗೆ ಒಪ್ಪಿಸಿದ್ದು, ಈ ಸಂದರ್ಭ ಕಾರಿನಲ್ಲಿ 5 ತಲವಾರು ಹಾಗೂ 3 ಮೊಬಲ್ಗಳು ಪತ್ತೆಯಾಗಿವೆ.
ಬೈಕಿಗೆ ಕಾರು ಡಿಕ್ಕಿ ಹೊಡೆದ ಸಂದರ್ಭ ನೆಲಕ್ಕೆ ಬಿದ್ದದ್ದರಿಂದ ಭರತ್ ರಾಜ್ ಅವರಿಗೆ ಅಲ್ಪ ಪ್ರಮಾಣದ ಗಾಯಗಾಳಾಗಿದ್ದು, ಅವರು ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.