ಮ೦ಗಳೂರು ಮಾ.06: ಪಿಲಿಕುಳ ದೋಣಿ ವಿಹಾರ ಕೇಂದ್ರದಲ್ಲಿರುವ ಕೆರೆಯಲ್ಲಿ ರಾಡ್ ಬಳಸಿ ಗಾಳ ಹಾಕಿ ಮೀನು ಹಿಡಿಯುವ ಆಂಗ್ಲಿಂಗ್(ಗಾಳ ಶಿಕಾರಿ)ಯನ್ನು ಭಾನುವಾರ ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ರವರು ಉದ್ಘಾಟಸಿದರು.
ಕರ್ನಾಟಕ ಮೀನು ಅಭಿವೃಧ್ದಿ ನಿಗಮದಿಂದ ಮೊಬೈಲ್ ಮತ್ಸ್ಯದರ್ಶಿನಿ (ಮೊಬೈಲ್ ಕ್ಯಾಂಟಿನ್) ವ್ಯವಸ್ಥೆಯನ್ನು ಕೂಡಾ ಈ ಸಂಧರ್ಭದಲ್ಲಿ ಮಾಡಲಾಯಿತು.
ಸ್ಥಳದಲ್ಲೇ ತಯಾರಿಸಿದ ಮೀನಿನ ಖಾದ್ಯಗಳು, ವಿವಿಧ ಜಾತಿಯ ಮೀನುಗಳ ಪ್ರದರ್ಶನ ಹಾಗೂ ಮಾರಾಟ ಕೂಡಾ ಮಾಡಲಾಯಿತು.