ಕನ್ನಡ ವಾರ್ತೆಗಳು

ಎಂಟು ಮಂದಿ ಸಾಧಕರಿಗೆ ಗೃಹ ಸಚಿವರಿಂದ ಸಂದೇಶ ಪ್ರಶಸ್ತಿ ಪ್ರದಾನ

Pinterest LinkedIn Tumblr

Sandesh_awrd_photo_1

ಮಂಗಳೂರು,ಜ.17: ಕರ್ನಾಟಕ ಪ್ರಾಂತೀಯ ಕೆಥೊಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ 016ನೆ ಸಾಲಿನ ಸಂದೇಶ ಪ್ರಶಸ್ತಿಯನ್ನು ಎಂಟು ಮಂದಿ ಸಾಧಕರಿಗೆ ಪ್ರದಾನ ಮಾಡಲಾಯಿತು.

ಶನಿವಾರ ಸಂಜೆ ನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ದೇಶದಲ್ಲಿ ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಎತ್ತಿಹಿಡಿದ ಡಾ.ಬಾಬಾ ಸಾಹೇಬ ರಚಿಸಿದ ಸಂವಿಧಾನವಿದ್ದರೂ ಅಸಹಿಷ್ಣುತೆ ವಾತಾವರಣ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

Sandesh_award_pics_2 Sandesh_award_pics_3 Sandesh_award_pics_4 Sandesh_award_pics_5 Sandesh_award_pics_6 Sandesh_award_pics_7 Sandesh_award_pics_8 Sandesh_award_pics_9 Sandesh_award_pics_10

ಭಾರತೀಯರಿಗೆ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ನೀಡಿದೆ. ಬದುಕಲು ಮುಕ್ತ ಅವಕಾಶವನ್ನು ನೀಡಿದೆ ಈ ಆಶಯಗಳನ್ನೇ ಬಲಿಕೊಡುವ ಪ್ರಯತ್ನ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಆದರೆ ಕಲೆ ಸಂಸ್ಕೃತಿಯ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಸಂದೇಶ ಸಂಸ್ಥೆಯ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದು ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಗ್ಲಾಡಿಸ್ ರೇಗೊ, ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಸುಗಂಥಾ ಸತೀಯರಾಜ್, ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಯನ್ನು ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿಯನ್ನು ದೇವದಾಸ್ ಕಾಪಿಕಾಡ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಜೊಯೆಲ್ ಪಿರೇರಾ, ಸಂದೇಶ ಕಲಾ ಪ್ರಶಸ್ತಿಯನ್ನು ಉಸ್ತಾದ್ ರಫೀಕ್ ಖಾನ್, ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಥಾಮಸ್ ಡಿಸೋಜ, ಸಂದೇಶ ವಿಶೇಷ ಪ್ರಶಸ್ತಿಯನ್ನು ಜಿ.ಎಸ್.ಜಯದೇವ ಅವರಿಗೆ ನೀಡಿ ಗೌರವಿಸಲಾಯಿತು.

Sandesh_award_pics_11 Sandesh_award_pics_12 Sandesh_award_pics_13 Sandesh_award_pics_14 Sandesh_award_pics_15 Sandesh_award_pics_16 Sandesh_award_pics_17 Sandesh_award_pics_18 Sandesh_award_pics_19 Sandesh_award_pics_20 Sandesh_award_pics_21 Sandesh_award_pics_22 Sandesh_award_pics_23 Sandesh_award_pics_24 Sandesh_award_pics_25 Sandesh_award_pics_26 Sandesh_award_pics_27 Sandesh_award_pics_28 Sandesh_award_pics_29 Sandesh_award_pics_30 Sandesh_award_pics_31 Sandesh_award_pics_32 Sandesh_award_pics_33 Sandesh_award_pics_34 Sandesh_award_pics_35 Sandesh_award_pics_36 Sandesh_award_pics_37 Sandesh_award_pics_38 Sandesh_award_pics_39 Sandesh_award_pics_40 Sandesh_award_pics_41 Sandesh_award_pics_42

ಬೆಂಗಳೂರು ಕೆಥೊಲಿಕ್ ಕ್ರೈಸ್ತ ಮಹಾ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ವಂ.ಬರ್ನಾಡ್ ಮೊರಾಸ್, ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಅಧ್ಯಕ್ಷ ವಂ.ಅಲೋಶಿಯಸ್ ಪಾವ್ಲ್ ಡಿಸೋಜ, ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ.ಜೆರಾಲ್ಡ್ ಐಸಾಕ್ ಲೋಬೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ನಾ.ಡಿಸೋಜ, ಸಂದೇಶ ಪ್ರತಿಷ್ಠಾನದ ಟ್ರಸ್ಟಿ ವಂ.ಐವನ್ ಪಿಂಟೊ, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ವಿಕ್ಟರ್ ವಿಜಯ್ ಲೋಬೊ ಸ್ವಾಗತಿಸಿದರು.

Write A Comment