ಮೂಲ್ಕಿ, ಡಿ.5: ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಕಾರ್ನಾಡಿನಲ್ಲಿ ಸಂಭವಿಸಿದೆ.
ಕಾರ್ನಾಡು ಬೈಪಾಸಿನಲ್ಲಿರುವ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ, ಕಾರ್ನಾಡು ಹರಿಹರ ಕ್ಷೇತ್ರ ಬಳಿಯ ನಿವಾಸಿಗಳಾದ ಯಶವಂತ ಸನಿಲ್ ಮತ್ತು ವಸಂತಿ ದಂಪತಿಯ ಪುತ್ರ ನಿಶಿಕಾಂತ್ (25) ಮೃತ ದುರ್ದೈವಿ.
ನಿಶಿಕಾಂತ್ ನಿನ್ನೆ ಬೆಳಗ್ಗೆ ಸಂಬಂಧಿ ರಮೇಶ್ ಸನಿಲ್ ಜೊತೆ ಹರಿಹರ ದೇವಳ ರಸ್ತೆಯ ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಮೂಲ್ಕಿಯತ್ತ ಅತಿವೇಗಿವಾಗಿ ಚಲಿಸುತ್ತಿದ್ದ ಬೊಲೆರೊ ವಾಹನ ನಿಶಿಕಾಂತ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡವರನ್ನು ತಕ್ಷಣವೇ ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬೊಲೆರೊ ಚಾಲಕನ ಅತಿವೇಗ ಹಾಗೂ ಅಜಾಗ್ರತೆಯ ಚಾಲನೆ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ಈ ಬಗ್ಗೆ ಸುರತ್ಕಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ