ಕನ್ನಡ ವಾರ್ತೆಗಳು

ಪ್ರಾರ್ಥನಾ ಮಂದಿರಕ್ಕೆ ಕಲ್ಲೆಸೆತ: ಅಧಿಕಾರಿಗಳ ಭೇಟಿ

Pinterest LinkedIn Tumblr

bajpe_masid_case

ಮ೦ಗಳೂರು ಡಿ.03 : ಬಜಪೆ ಸಮೀಪ ಕಲ್ಲೆಸೆತ ನಡೆದ ನಡೆದ ಈದ್ಗಾ ಮಸೀದಿಗೆ ಬುಧವಾರ ಮಂಗಳೂರು ಉಪವಿಭಾಗಾಧಿಕಾರಿ ಡಾ: ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು.

ಮಸೀದಿ ಒಳಗೆಹೋಗಿ ವೀಕ್ಷಿಸಿದ ಅವರು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಮಸೀದಿ ಸಮಿತಿ ಅಧ್ಯಕ್ಷರಿಗೆ ಸೂಚಿಸಿದರು. ಈಗಾಗಲೇ ಜಿಲ್ಲೆಯ ಎಲ್ಲಾ ಪ್ರಾರ್ಥನಾ ಮಂದಿರಗಳ ಸುತ್ತ ಸಿಸಿಟಿವಿ ಅಳವಡಿಕೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಸೀದಿ ಸಮೀಪ ಸಿಸಿ ಟಿ.ವಿ ಅಳವಡಿಸುವುದು, ರಾತ್ರಿ ಅಗತ್ಯ ಬೆಳಕಿನ ವ್ಯವಸ್ಥೆ ಏರ್ಪಡಿಸಲು ಉಪವಿಭಾಗಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ತಹಶೀಲ್ದಾರ್ ಶಿವನಂಜಪ್ಪ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಸುರತ್ಕಲ್ ಕಂದಾಯ ನಿರೀಕ್ಷಕ ನವೀನ್ ಮತ್ತಿತರರು ಇದ್ದರು.

Write A Comment