ಕನ್ನಡ ವಾರ್ತೆಗಳು

ತಲಪಾಡಿ ಕಣ್ವತೀರ್ಥದಲ್ಲಿ ಪೇಜಾವರ ಶ್ರೀಗಳಿಗೆ ಅಭಿವಂದನೆ

Pinterest LinkedIn Tumblr

kallukura_swamijii_photo

ಮಂಗಳೂರು,ನ.21: ಸರ್ವಜ್ಞ ಪೀಠವನ್ನು ಐದನೇ ಬಾರಿಗೆ ಏರಲಿರುವ ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ಹಾಗೂ ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ಶ್ರೀಪಾದರಿಗೆ ತಲಪಾಡಿ ಮಂಜೇಶ್ವರದಲ್ಲಿರುವ ಕಣ್ವತೀರ್ಥದಲ್ಲಿ ಅಭಿವಂದನಾ ಕಾರ್ಯಕ್ರಮ ಉಪ್ಪಳ ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು

ಅಭಿವಂದನಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಗೋಪಾಲ್ ಶೆಟ್ಟಿ ಅರಿಬೈಲು ಸ್ವಾಗತಿಸಿದರು.ಹರಿ ಶೆಟ್ಟಿ ಮಾಡ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯದರ್ಶಿ ಮಧುಸೂದನ ಆಚಾರ್ಯ ಪ್ರಸ್ತಾವನೆ ಗೈದರು. ಮಾಡ ಶಿವರಾಮ ಭಂಡಾರಿ, ಬಡಾಜೆ ಗೋಪಾಲಕೃಷ್ಣ ತಂತ್ರಿ, ಮಂಜು ಭಂಡಾರಿ ಉದ್ಯಾವರ, ಹರಿಕೃಷ್ಣ ಪುನರೂರು, ಎಸ್. ಪ್ರದೀಪ ಕುಮಾರ ಕಲ್ಕೂರ, ವಿನಯ ನಾಯಕ್. ಸುಧಾಕರ ರಾವ್ ಪೇಜಾವರ್, ಆನಂದ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

Write A Comment