ಉಡುಪಿ: ವಿಶ್ವವಿದ್ಯಾನಿಲಯದ ವತಿಯಿಂದ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ ಕಾರ್ಯಕ್ರಮವು ಇಂದು ಮಣಿಪಾಲ ವ್ಯಾಲ್ಯೂ ಹೊಟೇಲ್ನ ಚೈತ್ಯ ಭವನದಲ್ಲಿ ನೆಡೆಯಿತು.
ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ನ್ನು ಕೇಕ್ ತಯಾರಿಸುವ 2 ತಿಂಗಳ ಮೊದಲು ಗೋಡಂಬಿ ಒಣ ದ್ರಾಕ್ಷಿ,ಬಾದಮಿ,ಪಿಸ್ತಾ,ಚೆರ್ರಿ ಇತರೆ ಒಣ ಹಣ್ಣು ಮತ್ತು ವಿಸ್ಕಿ,ರಮ್,ವೈನ್ ಜೊತೆ ಸೇರಿಸಿ ಇಡಲಾಗುತ್ತದೆ .ಸುಮಾರು 2 ತಿಂಗಳ ನಂತರ ಈ ಮಿಶ್ರಣ ಒಂದು ಹಂತದ ಹದಕ್ಕೆ ಬರುತ್ತದೆ,ತದನಂತರ ಕೇಕ್ ತಯಾರಿಸಿ,ಎಲ್ಲಾ ಉನ್ನತ ಅಧಿಕಾರಿಗಳಿಗೆ ನೀಡಲಾಗುತ್ತದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ.ಹಚ್.ಎಸ್.ಬಲ್ಲಾಳ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ.ರಾಮಾದಾಸ್ ಪೈ, ಮಣಿಪಾಲ ವಿಶ್ವವಿದ್ಯಾನಿಲಯದ ಉಪ ಕುಲಪತಿ ವಿನೋದ್ ಭಟ್,ಡಾ.ರವೀಂದ್ರನಾಥ್ ನಾಂಯಕ್.ಎಡ್ವಿನ್ ಡಿಸೋಜಾ,ಇಂದಿರಾ ಮೊದಲಾದವರು ಉಪಸ್ಥಿತರು



