ಅಂಕೋಲಾ, ನ.07: ಪೊಲೀಸ್ ವ್ಯಾನೊಂದು ಪಲ್ಟಿಯಾಗಿ ಮಂಗಳೂರು ಪಿಎಸ್ಸೈ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನ ಬಾಗಿಲಿನ ತಿರುವುನಲ್ಲಿ ಶುಕ್ರವಾರ ನಡೆದಿದೆ.
ಘಟನೆಯಿಂದ ಮಂಗಳೂರಿನ ದಕ್ಷಿಣ ಪಾಂಡೇಶ್ವರ ಪೊಲೀಸ್ ಠಾಣೆಯ ಅಪರಾಧ ವಿಾಗದ ಪಿಎಸ್ಸೈ ಅನಂತ ಮಂಜು ಹಾಗೂ ಸಿಬ್ಬಂದಿಯಾದ ಸಂತೋಷ್ ಕುಮಾರ್, ಧನಂಜಯ ಮೂರ್ತಿ, ವಾಹನ ಚಾಲಕ ದಯಾನಂದ ಸಣ್ಣ ಪುಟ್ಟ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಕಾರಾಗೃಹದಲ್ಲಿದ್ದ ಕೈದಿಗಳನ್ನು ಬೆಳಗಾವಿ ಕಾರಾಗೃಹಕ್ಕೆ ಸಾಗಿಸಿ ವಾಪಸ್ ಬರುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ರಸ್ತೆಯ ಬಲ ದಿಕ್ಕಿಗೆ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಪಿಐ ಅರುಣ ಕುಮಾರ್ ಜಿ. ಕೊಳ್ಳೂರು ಭೇಟಿ ನೀಡಿದರು.