ಕನ್ನಡ ವಾರ್ತೆಗಳು

ಸಾಲಿಗ್ರಾಮ: ಚತುಷ್ಪತ ಅವಾಂತರಕ್ಕೆ ತಾಲೂಕು ಪಂಚಾಯತ್ ಸದಸ್ಯ ಬಲಿ

Pinterest LinkedIn Tumblr

ಉಡುಪಿ: ಸಾಲಿಗ್ರಾಮದಲ್ಲಿ ಶನಿವಾರ ಸಂಜೆ ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬ್ರಹ್ಮಾವರ ಹಾರಾಡಿ ಕ್ಷೇತ್ರದ ತಾಲೂಕು ಪಂಚಾಯತ್‌ ಸದಸ್ಯ ಕೇಶವ ಕುಮಾರ್‌(65) ಸಾವನ್ನಪ್ಪಿದ್ದಾರೆ.

T.P.member_Accident_Death

ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದ ಕೇಶವ್ ಅವರು ಪ್ರಥಮ ಬಾರಿಗೆ ಉಡುಪಿ ತಾಲೂಕು ಪಂಚಾಯತ್‌ನ್ನು ಹಾರಾಡಿ ಕ್ಷೇತ್ರದಿಂದ ಪ್ರತಿನಿಧಿಸಿದ್ದರು ಅಲ್ಲದೇ ಈ ಮೊದಲು ಹಾರಾಡಿ ಗ್ರಾಮ ಪಂಚಾಯತ್‌ನಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಕೇಶವ ಕುಮಾರ್‌ ಅವರು ನಿಸ್ವಾರ್ಥ ಸೇವೆಯ ಮೂಲಕ ಜನಾನುರಾಗಿದ್ದರು. ಹಲವಾರು ಸಮಾಜಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಹೆದ್ದಾರಿ ಚತುಷ್ಪಥ ಅವಾಂತರ:
ಕೋಟದಿಂದ ಆರಂಭಗೊಂಡು ಸಾಸ್ಥಾನ ಹಾಗೂ ಬ್ರಹ್ಮಾವರದವೆರೆಗೂ ಚತುಷ್ಪತ ಕಾಮಗಾರಿ ಅರೆಬರೆಯಾಗಿದ್ದು ಕೆಲವೆಡೆ ಒನ್ ವೇ ಕೆಲವೆಡೆ ಟು- ವೇ ರಸ್ತೆ ಸಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು ಇದು ವಾಹನ ಸವಾರರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದು ಇದರಿಂದಲೇ ಅವಘಡಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Write A Comment