ಕನ್ನಡ ವಾರ್ತೆಗಳು

ಭಾರತ್ ಬ್ಯಾಂಕ್ ನ 78 ನೇ ಶಾಖೆ ಚಾರ್ಕೊಪ್ ನಲ್ಲಿ ಉದ್ಘಾಟನೆ.

Pinterest LinkedIn Tumblr

mumbai_bank_phoro_1

ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಪ್ರಾಯೋಜಕತ್ವದ ಭಾರತ್ ಬ್ಯಾಂಕ್ ನ 78 ನೇ ಶಾಖೆಯನ್ನು ಅ.19 ರಂದು ಕಾಂದಿವಲಿ ಪಶ್ಚಿಮದ ಚಾರ್ಕೊಪ್ ನಲ್ಲಿ ಬೊರಿವಲಿ ಸಂಸದ ಗೋಪಾಲ್ ಶೆಟ್ಟಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಈ ಸಂದರ್ಭ ಬಂಟ್ಸ್ ನ್ಯಾಯ ಮಂಡಳಿಯ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಚಾರ್ಕೊಪ್ ಕನ್ನಡ ಬಳಗದ ಅಧ್ಯಕ್ಷ ಮಂಜುನಾಥ್ ಬಣ್ಣೂರು ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

mumbai_bank_phoro_2 mumbai_bank_phoro_3

ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಜಯ ಸಿ, ಸುವರ್ಣ, ಎಂ.ಡಿ. ಸಿ.ಆರ್. ಮೂಲ್ಕಿ, ನಿರ್ದೇಶಕ ಗಂಗಾಧರ್ ಜೆ. ಪೂಜಾರಿ, ಜನರಲ್ ಮ್ಯಾನೇಜರ್ ನಿತ್ಯಾನಂದ ಡಿ. ಕೋಟ್ಯಾನ್ ಈ ಸಂದರ್ಭ ಉಪಸ್ಥಿತರಿದ್ದರು.

ಇದೇ ವೇಳೆ ಧನಂಜಯ ಶಾಂತಿಯವರು ವಾಸ್ತು ಹೋಮ, ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು.

Write A Comment