ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಮಲಾಡ್ ಪೂರ್ವ ಕುರಾರ್ ವಿಲೇಜ್ ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪುತ್ತಿಗೆ ಮಠದ ಸ್ವಾಮೀಜಿಯವರು ಭೇಟಿ ದೇವಿಯ ಮೂರ್ತಿಗೆ ಮಂಗಳಾರತಿ ನಡೆಸಿದರು.
ಆ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯವರು ಸ್ವಾಮೀಜಿಯವರನ್ನು ಗೌರವಿಸಿದರು. ನಂತರ ಆಶೀರ್ವಚನ ನೀಡಿದ ಸ್ವಾಮೀಜಿಯವರು ಇಲ್ಲಿನ ನಮ್ಮವರು ತುಳುನಾಡನ್ನು ನೆನಪಿಸುವ ರೀತಿಯಲ್ಲಿ ಧಾರ್ಮಿಕ ನೆಲೆಯಲ್ಲಿ ಬದುಕನ್ನು ಕಟ್ಟಿದ್ದಾರೆ. ಇಂದಿನ ಯುವ ಜನಾಂಗ ಧರ್ಮ ದೇವರಿಂದ ದೂರವಾಗುತ್ತಿದ್ದು ಇಂತಹ ಸಂಧರ್ಬದಲ್ಲಿ ಮಂದಿರ ದೇವಸ್ಥಾನಗಳು ಧರ್ಮ ಜಾಗೃತಿಯ ಕೇಂದ್ರವಾಗಿದೆ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಘುನಾಥ ಕೊಠಾರಿ, ಶೇಖರ ಪೂಜಾರಿ ಭ್ರಹ್ಮಾವರ, ಬಾಬು ಸುವರ್ಣ, ಗಣೇಶ್ ಕುಂದರ್ ಮಹಿಳಾ ವಿಭಾಗದ ಭಾರತಿ ಕೋಟ್ಯಾನ್, ಶ್ಯಾಮಲ ಜಿ. ಪೂಜಾರಿ, ವಿದ್ಯಾ ಸನಿಲ್, ಗೀತಾ ಜತ್ತನ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.