ಮಂಗಳೂರು: ನಗರದ ಕೇಂದ್ರ ಮೈದಾನದಲ್ಲಿ ಹಿಂದೂ ಯುವ ಸೇನೆ ಆಶ್ರಯದಲ್ಲಿ ನಡೆದ 23ನೇ ವರ್ಷದ ಮಂಗಳೂರು ಗಣೇಶೋತ್ಸವವದಲ್ಲಿ ಪೂಜಿಸಿದ ಶ್ರೀ ಮಹಾಗಣಪತಿಯ ಭವ್ಯ ಶೋಭಾಯಾತ್ರೆ ಬುಧವಾರ ಬಹಳ ವಿಜೃಂಭಣೆಯಿಂದ ಜರಗಿತು.
ಸ್ಯಾಕ್ಸಫೋನ್ ವಾದನ, ಚೆಂಡೆವಾದನ, ಯಕ್ಷಗಾನ ಗೊಂಬೆಗಳು, ವೇಷಧಾರಿಗಳು ಹಾಗೂ ಇನ್ನಿತರ ವಿಶೇಷ ಆಕರ್ಷಕ ಟ್ಯಾಬ್ಲೋಗಳೊಂದಿಗೆ ನಗರದ ಕೇಂದ್ರ ಮೈದಾನದಿಂದ ಸಂಜೆ ಹೊರಟ ಶೋಭಾಯಾತ್ರೆಯು ಹಂಪನ್ಕಟ್ಟೆ ಸಿಗ್ನಲ್ ವೃತ್ತ ಮೂಲಕ ಕೆ.ಎಸ್.ರಾವ್ ರಸ್ತೆ, ನವಭಾರತ ಸರ್ಕಲ್, ಡೊಂಗರಕೇರಿ, ನ್ಯೂಚಿತ್ರ ಜಂಕ್ಸನ್ ಮೂಲಕ ರಥಭೀದಿಯ ಶ್ರೀ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಂಡಿತ್ತು.
ಶೋಭಾಯಾತ್ರೆಗೂ ಮೊದಲು ಕೇಂದ್ರ ಮೈದಾನದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಗಣೇಶೋತ್ಸವ ಸಮಿತಿ ಗೌರವಾದ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ ಪದವು, ಹಿಂದೂ ಯುವ ಸೇನೆ ಅಧ್ಯಕ್ಷರಾದ ಯಶೋಧರ ಚೌಟ, ಕಾರ್ಯದರ್ಶಿ ಪದ್ಮನಾಭ ನಾವೂರು, ಗಣೇಶೋತ್ಸವ ಸಮಿತಿ ಪ್ರಮುಖರಾದ ಉಮೇಶ್ ಪೈ, ಸುಕುಮಾರ್ ಸುರತ್ಕಲ್, ಸುರೇಶ್ ಶೆಟ್ಟಿ ಕೊಟ್ಟಾರ ಕ್ರಾಸ್, ಕೊರಗಪ್ಪ ಶೆಟ್ಟಿ ಆಕಾಶ ಭವನ, ವಸಂತ್ ಉರ್ವಾಸ್ಟೋರ್ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.