ಮಂಗಳೂರು: ಕರ್ನಾಟಕ ರಾಜ್ಯ ಪೊಲೀಸ್-ಗುಪ್ತಚರ (ಇಂಟೆಲಿಜೆನ್ಸ್) ಇಲಾಖೆಯ ಮಂಗಳೂರು ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ಜಯಂತ್ ವಿ. ಶೆಟ್ಟಿ ಭಡ್ತಿಗೊಂಡಿದ್ದಾರೆ. ಅವರು ಈವರೆಗೆ ಈ ವಿಭಾಗದ ಡಿವೈಎಸ್ಪಿ ಆಗಿದ್ದರು.
ಸೋಶಿಯಲ್ ವರ್ಕ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು 1981ರಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆ ಸೇರಿದ ಅವರು ವಿಶೇಷ ಕರ್ತವ್ಯ ಸಾಧನೆಗೆ 1995ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ, 1999ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕ, ಬಳಿಕ ವಿಶ್ವಸಂಸ್ಥೆಯಲ್ಲಿ ಶಾಂತಿಪಾಲನ ಪಡೆಯಲ್ಲಿ ಸಲ್ಲಿಸಿದ ಸೇವೆಗೆ ಪೊಲೀಸ್ ಪದಕ ಪಡೆದಿದ್ದಾರೆ.
ಕರ್ನಾಟಕ ರಣಜೀ ಟ್ರೋಫಿ ಕ್ರಿಕೆಟ್ ತಂಡಕ್ಕೂ ಅವರು ಆಯ್ಕೆಯಾಗಿದ್ದರು.