ಉಡುಪಿ: ಕುಮಟಾ ಬಳಿ ಸೆ. 1ರಂದು ಅನಿಲ ತುಂಬಿದ ಟ್ಯಾಂಕರ್ ಉರುಳಿ ಸ್ಫೋಟಗೊಂಡ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿದೆ.
ಘಟನೆ ಸಂಭವಿಸಿದ ದಿನದಿಂದ ಸೆ. 6ರವರೆಗೂ ನಿತ್ಯ ಒಂದಿಬ್ಬರು ಗಾಯಾಳುಗಳು ಸಾವಿಗೀಡಾಗುತ್ತಿದ್ದರು. ನಾಲ್ಕು ದಿನಗಳ ಬಳಿಕ ಗುರುವಾರ ಇನ್ನೋರ್ವ ಗಾಯಾಳು ಮೃತಪಟ್ಟಿದ್ದಾರೆ. ದೇವು ಚಂದ್ರು ಪಟಗಾರ (75) ನಿನ್ನೆ ಮೃತರಾದವರು .
ಒಟ್ಟು 14 ಜನರನ್ನು ಸುಟ್ಟಗಾಯಗಳ ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಗೆ ಕರೆತರಲಾಗಿತ್ತು. ಇನ್ನು ಮೂವರು ಚೇತರಿಸಿಕೊಳ್ಳುತ್ತಿದ್ದಾರೆ.