ಕನ್ನಡ ವಾರ್ತೆಗಳು

ಶಿವಮೊಗ್ಗ 1000 ಕ್ಕೆ 1000, ಬಿಜಾಪುರ 1000 ಕ್ಕೆ 2000; ಕೆ.ಪಿ.ಎಲ್. ಬೆಟ್ಟಿಂಗ್ ಬುಕ್ಕಿ ಅಂದರ್

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಕಂಡ್ಲೂರು ಬಸ್‌ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮರದ ಅಡಿಯಲ್ಲಿ ನಿಂತು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕಾವ್ರಾಡಿ ಗ್ರಾಮದ ದೂಪದಕಟ್ಟೆ ನಿವಾಸಿ ಮಹೇಶ ಆಚಾರಿ (28) ಬಂಧಿತ ಆರೋಪಿ.

Betting_Bukki_Arrest

(ಬಂಧಿತ ಆರೋಪಿ)

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೆ.ಪಿ.ಎಲ್. ಕ್ರಿಕೆಟ್‌ ಪಂದ್ಯಾಟದ ನಮ್ಮ ಶಿವಮೊಗ್ಗ ಹಾಗೂ ಬಿಜಾಪುರ ಬುಲ್ಸ್‌ತಂಡಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು ಗಂಟೆಗೆ ದಾಳಿ ನಡೆಸಿದ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ಅವರು ಆತನನ್ನು ಬಂಧಿಸಿದ್ದಾರೆ. ನಮ್ಮ ಶಿವಮೊಗ್ಗ 1000 ಕ್ಕೆ 1000, ಬಿಜಾಪುರ 1000 ಕ್ಕೆ 2000 ಎಂದು ಜೋರಾಗಿ ಹೇಳುತ್ತಾ ಬೆಟ್ಟಿಂಗ್‌ ನಡೆಸುತ್ತಿದ್ದ ಎನ್ನಲಾಗಿದೆ.

ಬಂಧಿತನಿಂದ ಮೊಬೈಲ್, ರೂ.15 ಸಾವಿರ ನಗದು, ಚೆವರ್‌ಲೆಟ್ ಕಾರು ಹಾಗೂ ಇತರ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment