ಕನ್ನಡ ವಾರ್ತೆಗಳು

‘ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರಕಟ : ಕರಾವಳಿಯ ಮೂರು ಮಂದಿಗೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

Pinterest LinkedIn Tumblr

Best_Teachers_awrd_1

ಮಂಗಳೂರು, ಸೆ.4: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದೆ. ಪ್ರೌಢಶಾಲಾ ವಿಭಾಗದಲ್ಲಿ 5 ಮಂದಿ ಶಿಕ್ಷಕರಿಗೆ, ಪ್ರಾಥಮಿಕ ಶಾಲಾ ವಿಭಾಗದ 7 ಶಿಕ್ಷಕರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ

ಪ್ರೌಢ ಶಾಲಾ ವಿಭಾಗ: ಮಂಗಳೂರಿನ ಸೈಂಟ್ ಮೇರೀಸ್ ಅನುದಾನಿತ ಪ್ರೌಢ ಶಾಲೆ ಫಳ್ನೀರ್ ಇದರ ಶಿಕ್ಷಕಿ ಸೇವಂತಿ, ಪೊಂಪೈ ಪ್ರೌಢ ಶಾಲೆ ಉರ್ವ ಮಂಗಳೂರು ಇದರ ಕನ್ನಡ ಭಾಷಾ ಶಿಕ್ಷಕಿ ಸಾವಿತ್ರಿ ಕೆ., ಜೈನ ಪ್ರೌಢಶಾಲೆ ಮೂಡುಬಿದಿರೆ ಇದರ ಸಹ ಶಿಕ್ಷಕ ಆರ್. ರಾಜ್‌ಕುಮಾರ್, ಸ.ಪ.ಪೂ.ಕಾಲೇಜು ಮೊಂಟೆಪದವು ಬಂಟ್ವಾಳ ಇದರ ಪ್ರಭಾರ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಟಿ.ಎನ್., ಸಂತ ಜಾರ್ಜ್ ಪ್ರೌಢ ಶಾಲೆ ನೆಲ್ಯಾಡಿ ಪುತ್ತೂರು ಇದರ ಶಿಕ್ಷಕ ಉಲಹನ್ನನ್ ಪಿ.ಎಂ. ಪ್ರಾಥಮಿಕ ಶಾಲಾ ಭಾಗ: ವೆಂಕಟ್ರಮಣ ಪ್ರಾ.ಶಾಲೆ ಕುಳಾಯಿ ಇದರ ಮುಖ್ಯ ಶಿಕ್ಷಕ ಕೆ.ಕೆ. ಪೇಜಾವರ್, ಮಂಗಳೂರು ಉತ್ತರ ವಲಯ, ದ.ಕ.ಜಿ.ಪಂ.ಸ.ಉ.ಹಿ. ಪ್ರಾ.ಶಾಲೆ ಬಬ್ಬುಕಟ್ಟೆ ಪೆರ್ಮನ್ನೂರು ಇದರ ಮುಖ್ಯ ಶಿಕ್ಷಕಿ ಟಿ. ಸೀತಾಲಕ್ಷ್ಮೀ , ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಾಲ್ಪಾಡಿ ಮಂಗಳೂರು ದಕ್ಷಿಣ ವಲಯ ಇದರ ಮುಖ್ಯ ಶಿಕ್ಷಕ ನೋಬರ್ಟ್ ಪಿರೇರಾ, ಮೂಡುಬಿದಿರೆ ವಲಯ, ದ.ಕ.ಜಿ.ಪಂ.ಸ.ಉ.ಹಿ.ಪ್ರಾ.ಶಾಲೆ ಹೂಹಾಕುವಕಲ್ಲು ಬಂಟ್ವಾಳ ಇದರ ಮುಖ್ಯ ಶಿಕ್ಷಕಿ ಶಾರದಾ ಬಿ., ದ.ಕ.ಜಿ.ಪಂ.ಸ..ಪ್ರಾ.ಶಾಲೆ, ಸಾವ್ಯ, ಬೆಳ್ತಂಗಡಿ ಇದರ ಮುಖ್ಯ ಶಿಕ್ಷಕ ಅಬೂಬಕರ್ ಬಿ., ದ.ಕ.ಜಿ.ಪಂ.ಸ.ಪ್ರಾ.ಶಾಲೆ ಪುತ್ತಿಗೆ ಇದರ ಸಹ ಶಿಕ್ಷಕ ಹನುಮಂತಪ್ಪ ಕೆ., ದ.ಕ.ಜಿ.ಪಂ.ಸ.ಉ.ಹಿ.ಪ್ರಾ.ಶಾಲೆ ಮಂಡೆಕೋಲು ಸುಳ್ಯ ಇದರ ಮುಖ್ಯಶಿಕ್ಷಕರು ಪದ್ಮ ಡಿ. ಜಿಲ್ಲಾ ಸಮಿತಿಯು ಸಭೆ ನಡೆಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಸೆ. 5ರಂದು ಒಕ್ಕಲಿಗ ಗೌಡ ಸಭಾಭವನ, ತೆಂಕಿಲ ಪುತ್ತೂರು ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಡಿಡಿಪಿಐ ವಾಲ್ಟರ್ ಡಿಮೆಲ್ಲೋ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಉಡುಪಿ ಜಿಲ್ಲೆ:

ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಪ್ರೌಢ ಶಾಲಾ ವಿಭಾಗದಿಂದ ಐವರು ಹಾಗೂ ಪ್ರಾಥಮಿಕ ಶಾಲಾ ವಿಭಾಗದಿಂದ ಐವರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರೌಢ ಶಾಲಾ ಶಿಕ್ಷಕರು: ಬ್ರಹ್ಮಾವರ ವಲಯ- ಕಾವಡಿ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಕಿರಣ್ ಹೆಗ್ಡೆ, ಕುಂದಾಪುರ ವಲಯ- ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಭಾಕರ ಮಿತ್ಯಾಂತ, ಬೈಂದೂರು ವಲಯ- ಹಕ್ಲಾಡಿ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಡಾ. ಕೆ.ಕಿಶೋರ ಕುಮಾರ್ ಶೆಟ್ಟಿ, ಉಡುಪಿ ವಲಯ- ಕಡಿಯಾಳಿ ಯು.ಕಮಲಾ ಬಾಯಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಿ.ಗುಣಕರ ಶೆಟ್ಟಿ, ಕಾರ್ಕಳ ವಲಯ- ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಪ್ರಕಾಶ್ ನಾಯ್ಕಿ.

ಪ್ರಾಥಮಿಕ ಶಾಲಾ ಶಿಕ್ಷಕರು: ಕಾರ್ಕಳ ವಲಯ- ನೆಲ್ಲಿಕಟ್ಟೆ ಸರಕಾರಿ ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ರವೀಂದ್ರ ಹೆಗ್ಡೆ, ಉಡುಪಿ ವಲಯ- ಹೆಜಮಾಡಿ ಸ.ಮಾ. ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ರತಿ ವೈ, ಬೈಂದೂರು ವಲಯ- ಮಯ್ಯಾಡಿ ಶ್ರೀಧರ್ಮಸ್ಥಳ ಮಾ. ಹಿ. ಪ್ರಾ.ಶಾಲೆಯ ಸಹ ಶಿಕ್ಷಕಿ ವೇದಾವತಿ, ಕುಂದಾಪುರ ವಲಯ- ಹೆಸ್ಕತ್ತೂರು ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಅಶೋಕ್ ತೆಕ್ಕಟ್ಟೆ, ಬ್ರಹ್ಮಾವರ ವಲಯ- ಕೀಳಂಜೆ ಬಿ.ಬಿ.ಹೆಗ್ಡೆ ಅನುದಾನಿತ ಹಿ. ಪ್ರಾ. ಶಾಲೆಮುಖ್ಯ ಶಿಕ್ಷಕ ಎಚ್.ಸಖಾರಾಮ್.

Write A Comment