ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಮೊಗವೀರ ಸಮಾಜದ ಆರ್ಥಿಕ ಸಂಸ್ಥೆ ಮೊಗವೀರ ಬ್ಯಾಂಕಿನ 2015 ರಿಂದ 2021ರ ಅವಧಿಗೆ ನಡೆದ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ನಾಡೋಜ ಡಾ| ಜಿ. ಶಂಕರ್ ಬೆಂಬಲಿತ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಬೆಂಬಲಿತ ಯುನೈಟೆಡ್ ಪ್ಯಾನೆಲ್ನ ಎಲ್ಲ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಜು. 26ರಂದು ಜರಗಿದ ಚುನಾವಣೆಯ ಮತ ಎಣಿಕೆಯು ಜು. 27ರಂದು ನಡೆದಿದ್ದು ಯುನೈಟೆಡ್ ಪ್ಯಾನೆಲ್ನ ಎಲ್ಲ ಅಭ್ಯರ್ಥಿಗಳು ಜಯಶಾಲಿಗಳಾದರು ಎಂದು ಚುನಾವಣಾಧಿಕಾರಿ ತಿಳಿಸಿದರು.ವಿಜಯಿ ಅಭ್ಯರ್ಥಿಗಳು, ಯುನೈಟೆಟ್ ಪ್ಯಾನೆಲ್ನ ಸದಾನಂದ ಕೋಟ್ಯಾನ್, ಸುರೇಶ್ ಕಾಂಚನ್, ಗೋಪಾಲ್ ಎಸ್. ಪುತ್ರನ್, ಧರ್ಮಪಾಲ್ ಪಿ, ಭಾಸ್ಕರ್ ಎನ್. ಕಾಂಚನ್, ಜಗದೀಶ್ ಜೆ. ಕಾಂಚನ್, ದಾಮೋದರ ಡಿ. ಕರ್ಕೇರ, ಜನಾರ್ಧನ್ ಟಿ. ಮೂಲ್ಕಿ, ಪುರುಷೋತ್ತಮ ಎಸ್. ಶ್ರೀಯಾನ್, ಜಯಶೀಲ ಬಿ. ತಿಂಗಳಾಯ, ಕೃಷ್ಣ ಕುಮಾರ್ ಎಲ್. ಬಂಗೇರ, ಮುಕೇಶ್ ಕೆ. ಬಂಗೇರ,, ಶೀಲಾ ಇಂದು ಅಮೀನ್ ಮತ್ತು ಸೋನಂ ಅಜಿತ್ ಸುವರ್ಣ.ಈ ಬಾರಿಯ ಚುನಾವಣೆಯಲ್ಲಿ ಮೂರು ಬಣಗಳ ಅರ್ಭ್ಯರ್ಥಿಗಳು ಸ್ಪರ್ಧಿಸಿದ್ದರು.
ವಿಜಯಿ ಅಭ್ಯರ್ಥಿಗಳನ್ನು ಹಾಗೂ ಮತದಾರರನ್ನು ನಾಡೋಜ ಡಾ| ಜಿ. ಶಂಕರ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್ ಜಿ. ಸುವರ್ಣ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಮಹಾಬಲ ಕುಂದರ್ ಮೊದಲಾದವರು ಅಭಿನಂದಿಸಿರುವರು.