ಕನ್ನಡ ವಾರ್ತೆಗಳು

ಜುಲೈ 25: ಡಾ| ಪಾವಗಡ ಪ್ರಕಾಶರಾವ್‌ ಅವರಿಗೆ ಶತಮಾನದ ಶತನಮನ -ಗೌರವಾರ್ಪಣೆ

Pinterest LinkedIn Tumblr

Dr_ravgad_prakarav

ಮಂಗಳೂರು,ಜುಲೈ.24:  ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನ ವರ್ಷಾಚರಣೆಯನ್ನು‌ ಆಚರಿಸುತ್ತಿರುವ ಸಲುವಾಗಿ ‘ಶತಮಾನದ ಶತನಮನ’ ಗೌರವಾರ್ಪಣೆಯನ್ನು ಜ್ಞಾನಪ್ರಕಾಶ ಬಿರುದಾಂಕಿತ ಹಿರಿಯ ವಿದ್ವಾಂಸ ಡಾ| ಪಾವಗಡ ಪ್ರಕಾಶ್‌ರಾವ್‌ ಅವರಿಗೆ ಸಮರ್ಪಿಸಲಿದೆ. ಜುಲೈ . 25 ಶನಿವಾರ, ಮಧ್ಯಾಹ್ನ 2 ಗಂಟೆಗೆ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಸಮಾರಂಭ‌ ಏರ್ಪಡಿಸಲಾಗಿದೆ.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರೊ| ಎಂ.ಬಿ. ಪುರಾಣಿಕ್‌ ಕಾರ್ಯಕ್ರಮ‌ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ‌ ಅಧ್ಯಕ್ಷತೆ ವಹಿಸಲಿರುವರು.

ಶಾರದಾ ವಿದ್ಯಾ ಸಂಸ್ಥೆಯ‌ ಉಪಾಧ್ಯಕ್ಷ ಕೆ. ಎಸ್. ಕಲ್ಲೂರಾಯ, ಕಾರ್ಯದರ್ಶಿ ಎಮ್.ಎಸ್. ಶಾಸ್ತ್ರಿ, ಟ್ರಸ್ಟಿ ಎಚ್. ಸೀತಾರಾಮ್ ಹಾಗೂ ಶಾರದಾ ಸೇವಾ ಸಮಿತಿ ಸುರತ್ಕಲ್‌ನ ಶ್ರೀ ರಾಮರಾವ್‌ ಅಭ್ಯಾಗತರಾಗಿ ಪಾಲ್ಗೊಳ್ಳಲಿರುವರು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ‌ ಅಭಿನಂದನಾ ಭಾಷಣ ಮಾಡಲಿರುವರೆಂದು ಪ್ರಕಟಣೆ ತಿಳಿಸಿದೆ.

Write A Comment