ಕುಂದಾಪುರ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಅರಣ್ಯ ಹಾಗೂ ಇತರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಗರದ ಹೊರವಲಯದ ವಡೇರಹೋಬಳಿ ಬಳಿ ಇರುವ ಕಾಂಡ್ಲ ನಡುತೋಪು ಹಾಗೂ ನೈಸರ್ಗಿಕ ಕಾಂಡ್ಲವನದ ವೀಕ್ಷಣೆಯನ್ನು ಗುರುವಾರ ನಡೆಸಿದರು.
ನದಿಯ ನಡುವೆ ನೈಸರ್ಗಿಕವಾಗಿ ಬೆಳೆದು ನಿಂತ ಕಾಂಡ್ಲವನ ಹಾಗೂ ಕಾಂಡ್ಲ ನಡುತೋಪನ್ನು ಬೋಟ್ ಮೂಲಕ ಸಂಚರಿಸಿ ವೀಕ್ಷಿಸಿದ ಅವರು ಈ ನೈಸರ್ಗಿಕ ಕಾಡನ್ನು ಸಂರಕ್ಷಿಸುವ ಬಗ್ಗೆ ಅರಣ್ಯ ಇಲಾಖೆ ತೆಗೆದುಕೊಂಡ ಕಾಳಜಿಯನ್ನು ಪ್ರಶಂಸಿದರು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಡಾ| ವಿಶಾಲ್, ಉಪ ಅರಣ್ಯಾಧಿಕಾರಿ ಪ್ರಕಾಶ್ ನೆಟಾಲ್ಕರ್, ವನ್ಯಜೀವಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಲೋಹಿತ್, ಉಪ ಅರಣ್ಯ ಅಧಿಕಾರಿ ಗುರುರಾಜ್ ಕಾವ್ರಾಡಿ, ದಿಲೀಪ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್ ಮೊದಲಾದವರು ಉಪಸ್ಥಿತರಿದ್ದರು.