ಕನ್ನಡ ವಾರ್ತೆಗಳು

ಕುಂಪಲ: ದುಷ್ಕರ್ಮಿಗಳ ತಂಡವೊಂದು ಮಸೀದಿಗೆ ಕಲ್ಲೆಸೆದು ಪರಾರಿ

Pinterest LinkedIn Tumblr

Mosque_stone_petal_2

ಉಳ್ಳಾಲ, ಮಸೀದಿಯೊಂದಕ್ಕೆ ದುಷ್ಕರ್ಮಿಗಳ ತಂಡವೊಂದು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ನೂರಾನಿ ಯತೀಂ ಖಾನ ಬಳಿ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.

Mosque_stone_petal_1

ಸೋಮವಾರ ಯತೀಂಖಾನದ ಬಳಿ ಇರುವ ಮಸೀದಿಯಲ್ಲಿ ರಾತ್ರಿ ನಮಾಜು ಮುಗಿಸಿ ೧೦ ಗಂಟೆಯ ವೇಳೆಗೆ ಮಸೀದಿಗೆ ಬೀಗ ಹಾಕಿ ಹೋಗಿದ್ದರು. ಮಧ್ಯರಾತ್ರಿ ಮೂರು ಗಂಟೆಯ ವೇಳೆಗೆ ವಾಹನವೊಂದರಲ್ಲಿ ಬಂದ ದುಷ್ಕರ್ಮಿಗಳ ತಂಡ ಮಸೀದಿಗೆ ಕಲ್ಲೆಸೆದು ಪರಾರಿಯಾಗಿದೆ. ಇದರಿಂದ ಮಸೀದಿಯ ಕಿಟಕಿ ಗಾಜು ಹಾನಿಯಾಗಿದ್ದು, ಸುಮಾರು ೧೫ ಸಾವಿರ ರೂ. ನಷ್ಟ ಸಂಭವಿಸಿದೆ. ಈ ಬಗ್ಗೆ ಮಸೀದಿಯ ಆಡಳಿತ ಸಮಿತಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment