ಕನ್ನಡ ವಾರ್ತೆಗಳು

ಕೋಟೆಕಣಿ ರಸ್ತೆಗೆ ಗುದ್ದಲಿ ಪೂಜೆ : ರೂ. 25 ಲಕ್ಷ ವೆಚ್ಚದಲ್ಲಿ ನವೀಕರಣ.

Pinterest LinkedIn Tumblr

urvstor_new_road

ಮಂಗಳೂರು,ಜೂನ್.06: ಶಾಸಕ ಜೆ. ಆರ್. ಲೋಬೊರವರು 25 ಲಕ್ಷ ವೆಚ್ಚದಲ್ಲಿ ಉರ್ವಸ್ಟೋರ್ ಮಾರ್ಕೆಟ್‌ನಿಂದ ಕೋಟೆಕಣಿ ಪರಿಶಿಷ್ಟ ಜಾತಿ ಕಾಲೊನಿಗೆ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಅದಿತ್ಯವಾರ ನೆರವೆರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಿಗೆ ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಸ್ತುತ ಸಾಲಿನಲ್ಲಿ ರೂ. 2.೦೦ ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇದರಂತೆ ಪರಿಶಿಷ್ಟ ಜಾತಿಯ ಕಾಲೊನಿಗಳ ಅಭಿವೃದ್ಧಿಗೆ ರೂ. 160.೦೦ ಲಕ್ಷ ಹಾಗೂ ಪರಿಶಿಷ್ಟ ಪಂಗಡ ಕಾಲೊನಿಗಳ ಅಭಿವೃದ್ಧಿಗೆ ರೂ. 40.00 ಲಕ್ಷದ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ, ಶಾಸಕರು ತೀಳಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೆಟರ್ ರಾಧಕೃಷ್ಣ, ಕಾಂಗ್ರೆಸ್ ಮುಂಖಡರಾದ ವಿಶ್ವಾಸ್ ದಾಸ್, ಬಿ.ಜಿ ಸುವರ್ಣ, ಟಿ.ಕೆ. ಸುಧೀರ್, ಅರುಣ್ ಕುವೆಲ್ಹೊ, ಗಣೇಶ್ ಕುಮಾರ್, ರಮಣಿ ಉಮೇಶ್, ಮಲ್ಲಿಕಾ, ರವಿ ಉರ್ವಾ, ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Write A Comment