ಕನ್ನಡ ವಾರ್ತೆಗಳು

ಬೈಕ್ ಲಾರಿ ಮುಖಾಮುಖಿ : ಬೈಕ್ ಸವಾರ ಸ್ಥಳದಲ್ಲೇ ಸಾವು .

Pinterest LinkedIn Tumblr

Bntwl_accdent_youth_a

ಬಂಟ್ವಾಳ,ಜೂನ್.04: ಬಂಟ್ವಾಳ ಕಾವಳ ಮೂಡೂರು ಗ್ರಾಮ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಡಿಪ್ಲೊಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ಮೃತ ಬೈಕ್ ಸವಾರನನ್ನು ಪೆಜತ್ರೋಡಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಿತ್ಯಾನಂದ ಪೂಜಾರಿಯವರ ಏಕೈಕ ಪುತ್ರ ಧನುಷ್ (18) ಎಂದು ಗುರುತಿಸಲಾಗಿದೆ.

ಪುತ್ತೂರು ವಿವೇಕಾನಂದ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ಧನುಷ್ ತನ್ನ ಬೈಕ್‍ನಲ್ಲಿ ಬಿ.ಸಿ.ರೋಡು ಕಡೆಯಿಂದ ಕೆದ್ದಳಿಕೆಯತ್ತ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Bntwl_accdent_youth_2

Bntwl_accdent_youth_1

ಘಟನೆಯ ವಿವರ :
ಧನುಷ್ ಬುಧವಾರ ಸಂಜೆ ಬಂಟ್ವಾಳದ ಸಂಬಂಧಿಕರೊಬ್ಬರ ಮನೆಯಿಂದ ವಾಪಾಸ್ ತನ್ನ ಮನೆಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ, ಎದುರುಗಡೆಯಿಂದ ಅತೀ ವೇಗವಾಗಿ ಅಜಾಗರೂಕತೆಯಿಂದ ಧಾವಿಸಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಧನುಷ್, ಗಂಭೀರ ಸ್ವರೂಪದ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರಾದರೂ, ಅದಾಗಲೇ ಧನುಷ್, ಕೊನೆಯುಸಿರು ಎಳೆದಿದ್ದಾನೆ ಎಂದು ತಿಳಿದು ಬಂದಿದೆ.

ಬಂಟ್ವಾಳ ಟ್ರಾಫಿಕ್ ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment