ಕನ್ನಡ ವಾರ್ತೆಗಳು

ಆಕ್ರಮ ಲಾಟರಿ ದಂದೆಯನ್ನು ಬಯಲಿಗೆಳೆದ ಪತ್ರಕರ್ತೆ ವಿಜಯಲಕ್ಷೀ ಶಿಬರೂರು ಅವರಿಗೆ ಮುಂಬಯಿ ಕಾರ್ಯನಿರತ ಪತ್ರಕರ್ತರಿಂದ ಅಭಿನಂದನೆ.

Pinterest LinkedIn Tumblr

vijay_laskmi_shibrur

ವರದಿ : ಈಶ್ವರ ಎಂ. ಐಲ್

ಮುಂಬಯಿ : ಕರ್ನಾಟಕದಲ್ಲಿ ಆಕ್ರಮ ಲಾಟರಿ ದಂದೆ ನಡೆಯುತ್ತಿರುದನ್ನು ಅರಿತ ಸುವರ್ಣ ವಾಹಿನಿಯ ಕವರ್ ಸ್ಟೋರಿಯ ನಿರ್ವಾಹಕಿ ಪತ್ರಕರ್ತೆ ಕಟೀಲು ಮೂಲದ ವಿಜಯಲಕ್ಷೀ ಶಿಬರೂರು ನೇತೃತ್ವದ ತಂಡವು ಸ್ಟಿಂಗ್ ಅಪರೇಶನ್ ನಡೆಸಿ ಮಾರ್ಚ್ 6 ರಂದು ಸುವರ್ಣ ವಾಹಿನಿಯಲ್ಲಿ ಪ್ರಸಾರ ಮಾಡಿ ಬಯಲು ಮಾಡಿದೆ. ಇದರಲ್ಲಿ ಕರ್ನಾಟಕದ ಪೋಲೀಸ್ ಇಲಾಖೆಯ ಕೈವಾಡವಿದ್ದು ಸಂಮಂದಿತರ ವಿರುದ್ದ ಸರಕಾರವು ಕೂಡಲೇ ಕ್ರಮಕೈಗೊಂಡಿದೆ.

ಹೆಚ್ಚುವರಿ ಪೋಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನೂ ಅಮಾನತು ಗೊಳಿಸಲಾಯಿತು. ಪತ್ರಕರ್ತೆ ವಿಜಯಲಕ್ಷೀ ಶಿಬರೂರು ಅವರು ಇತ್ತೀಚೆಗೆ ಮುಂಬಯಿಗಾಗಮಿಸಿದ ಸಂದರ್ಭದಲ್ಲಿ ಮುಂಬಯಿಯ ಕಾರ್ಯನಿರತ ಪತ್ರಕರ್ತರು ಅಭಿನಂದಿಸಿದ್ದು ಈ ಸಂದರ್ಭದಲ್ಲಿ ಕರ್ನಾಟಕ ಮಲ್ಲದ ದಿನೇಶ್ ಕುಲಾಲ್, ಮುಂಬಯಿ ನ್ಯೂಸ್ ನ ಹೇಮರಾಜ್ ಕರ್ಕೇರ, ವಾಣಿ ಪ್ರಸಾದ್ ಕರ್ಕೇರ, ಉದಯವಾಣಿಯ ಸುಭಾಷ್ ಶಿರಿಯ,ವೆಭ್ ಮಾಧ್ಯಮಗಳ ಮುಂಬಯಿಯ ಪ್ರಮುಖರಾದ ಈಶ್ವರ ಎಂ. ಐಲ್ ಹಾಗೂ ಸುವರ್ಣ ವಾಹಿನಿಯ ಮುಂಬಯಿಯ ವರದಿಗಾರರು ಉಪಸ್ಥಿತರಿದ್ದರು.

Write A Comment