ಉಳ್ಳಾಲ,ಮೇ. 21: ಬೈಕ್ಗೆ ಕಾರ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರೆ ಸಹಸವಾರ ಉಸ್ಮಾನ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ದೇರಳಕಟ್ಟೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಕಲ್ಕಟ್ಟ ಬಟ್ಯಡ್ಕ ನಿವಾಸಿ ಮೊಹಮ್ಮದ್ರವರ ಪುತ್ರ ಮೊಹಮ್ಮದ್ ಶಫೀಕ್(16) ಎಂದು ಹೆಸರಿಸಲಾಗಿದೆ.
ಘಟನೆಯವಿವರ: ಬೆಳಗ್ಗಿನ ವೇಳೆ ಉಸ್ಮಾನ್ ಅವರ ಬೈಕ್ನಲ್ಲಿ ಸಹಸವಾರನಾಗಿ ಬಟ್ಯಡ್ಕ ನಿವಾಸಿ ಮೊಹಮ್ಮದ್ ಶಫೀಕ್ ದೇರಳಕಟ್ಟೆ ಕಡೆ ಬರುತ್ತಿದ್ದ. ಬೈಕ್ ದೇರಳಕಟ್ಟೆ ಕಡೆ ತಲುಪುತ್ತಿದ್ದಂತೆಯೇ ಹಿಂದಿನಿಂದ ಬಂದ ವೈದ್ಯೆಯ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸಹಸವಾರ ಶಫೀಕ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡರು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಡಾ. ಪ್ರಶಾಂತಿ ಎಂಬ ವೈದ್ಯೆಯ ಕಾರ್ ದೇರಳಕಟ್ಟೆ ಪೆಟ್ರೋಲ್ ಪಂಪ್ ಬಳಿ ಬೈಕ್ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಈ ಬಗ್ಗೆ ಕಾರ್ ಚಾಲಕಿ ವೈದ್ಯೆ ಪ್ರಶಾಂತಿಯ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ಕೃಪೆ: ಆರೀಫ್ ಕಲ್ಲಕಟ್ಟ