ವರದಿ : ಈಶ್ವರ ಎಂ. ಐಲ್ / ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಮುಂಬಯಿಯ ಉದ್ಯಮಿಗಳು, ಬಿಲ್ಲವ ಜಾಗೃತಿ ಬಳಗ, ಮುಂಬಯಿಯ ಅಧ್ಯಕ್ಷರಾದ ಎನ್. ಟಿ. ಪೂಜಾರಿ ದಂಪತಿ ಮತ್ತು ಸುರೇಶ್ ಎಸ್. ಪೂಜಾರಿ ದಂಪತಿಗಳ ನೇತೃತ್ವದಲ್ಲಿ ಕುಂದಾಪುರದ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆಗೈದರು.
ಈ ಸಂದರ್ಭದಲ್ಲಿ ಬಿಲ್ಲವ ಜಾಗೃತಿ ಬಳಗ, ಮುಂಬಯಿಯ ಇತರ ಪದಾಧಿಕಾರಿಗಳಾದ ಪುರುಷೋತ್ತಮ ಕೋಟ್ಯಾನ್, ಶಾರದಾ ಸೂರು ಕರ್ಕೇರ ಮತ್ತಿತರ ಸ್ಥಳೀಯ ಗಣ್ಯರು ಉಪಸ್ಥಿತರಿದ್ದು ಎಲ್ಲಾ ನೂತನ ವಧೂವರರನ್ನು ಆಶೀರ್ವದಿಸಿದರು.