ಕನ್ನಡ ವಾರ್ತೆಗಳು

ಜಾಲಿರೈಡ್ ಅವಾಂತರ: ಅಪಘಾತದಲ್ಲಿ ವಿದ್ಯಾರ್ಥಿ ಸಾವು, ಗೆಳತಿಗೆ ಗಾಯ

Pinterest LinkedIn Tumblr
accident_images
ಉಡುಪಿ: ಗೆಳತಿಯನ್ನು ಕೂರಿಸಿಕೊಂಡು  ಬೈಕಲ್ಲಿ ಹೋಗುತ್ತಿದ್ದಾಗ ರಸ್ತೆ ವಿಭಾಜಕ ಮತ್ತು ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಂಐಟಿ ವಿದ್ಯಾರ್ಥಿ ಬೈಕ್ ಸವಾರ ಮೃತಪಟ್ಟಿದ್ದು, ಜೊತೆಗಿದ್ದ ಈತನ ಗೆಳತಿ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ.

ಮಣಿಪಾಲ  ಎಂಐಟಿಯಲ್ಲಿ ಕಲಿಯುತ್ತಿದ್ದ ಉತ್ತರ ಭಾರತದ ಉದಿತ್ ಜೈಸ್ವಾಲ್ (22) ಮೃತ ವಿದ್ಯಾರ್ಥಿ. ಆತನ ಗೆಳತಿ ವಿದ್ಯಾರ್ಥಿನಿ ನತಾಸ್ ಅಲಿಸಾ ಡಯಾಸ್ (22) ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಳೆ.

ಭಾನುವಾರ  ತರಗತಿಗೆ ರಜೆಯಾಗಿದ್ದು, ಸಂಜೆ ಹೊತ್ತಿಗೆ ಗೆಳತಿಯನ್ನು ಕೂರಿಸಿಕೊಂಡು ಮಣಿಪಾಲ ಟೈಗರ್ ಸರ್ಕಲ್‌ನಿಂದ ಉಡುಪಿ ಕಡೆಗೆ ಹೊರಟಿದ್ದಾರೆ. ಜಾಲಿರೈಡ್ ಮೂಡಿನಲ್ಲಿ ಅತಿವೇಗದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟೈಗರ್ ಸರ್ಕಲ್‌ನ ಸಮೀಪದಲ್ಲಿಯೇ ಡಿವೈಡರ್ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕನ ತಲೆ ಒಡೆದು ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಯುವತಿ ಗಾಯಗೊಂಡು ಅರಚುತ್ತಿದ್ದು, ಕೂಡಲೇ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ಯೀವ್ವರ್ ರಕ್ತ ಸ್ರಾವವಾದ್ದರಿಂದ ಯುವಕ ಮೃತಪಟ್ಟಿದ್ದಾನೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment