ಕಿನ್ನಿಗೋಳಿ,ಎಪ್ರಿಲ್.04 : ಮೂಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ಮಾರುತಿ 800 ಕಾರು ಬಟ್ಟಕೋಡಿ ಸಮೀಪ ಪಲ್ಟಿಯಾಗಿ ಚಾಲಕ ಪವಾಡ ಸದ್ರಶ್ಯ ಪಾರಾದ ಘಟನೆ ಶನಿವಾರ ನಡೆದಿದೆ.
ಮೂಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ಕಾರು ಬಟ್ಟಕೋಡಿ ಬಳಿ ಮುಂದಿನಿಂದ ಸಂಚರಿಸುತ್ತಿದ್ದ ಲಾರಿಯಲ್ಲಿ ಒವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ಬಲ ಬಾಗದಲ್ಲಿದ್ದ ಮೋರಿಯ ಮೆಲ್ಬಾಗದಲ್ಲಿ ಕಟ್ಟಿದ ಕಲ್ಲಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ನಿಂತಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮೋರಿಯ ಕಲ್ಲುಗಳು ಕಿತ್ತು ಹೋಗಿದ್ದು ಮಾತ್ರವಲ್ಲದೆ ಕಾರಿನ ಚಕ್ರ ಕಳಚಿ ಹೋಗಿದೆ, ಚಾಲಕ ಪಾವಾಡ ಸದ್ರಶ್ಯ ಪಾರಾಗಿದ್ದಾನೆ, ಅತೀ ವೇಗ ಮತ್ತು ಅಜಾಗರುಕತೆಯಿಂದ ಕಾರು ಚಲಾಯಿಸಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.