ಮಂಗಳೂರು,ಫೆ.25 : ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ, ಮಂಗಳೂರು ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ನೇತೃತ್ವದ ಬಣ ಎಲ್ಲಾ ಹತ್ತು ಸ್ಥಾನಗಳಲ್ಲಿ ಭರ್ಜರಿ ಜಯಗಳಿಸಿದೆ. ಹಾಲಿ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ರವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರಾಗಿ ಮತ್ತು ಸಹಕಾರ ಭಾರತಿಯ ಮೈಸೂರು ವಿಭಾಗ ಸಂಘಟನಾ ಪ್ರಮುಖ್ರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮುಂದಿನ ಐದು ವರ್ಷಗಳಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನದಿಂದ ಶ್ರೀ ಹರೀಶ್ ಆಚಾರ್, ಶ್ರೀ ಲೋಕೇಶ್ ಆಚಾರ್ಯ ಕೆ., ಶ್ರೀ ಜಗದೀಶ್ ಆಚಾರ್ಯ ಪಡುಪಣಂಬೂರು, ಶ್ರೀ ಭಾಸ್ಕರ ಆಚಾರ್ಯ ಡಿ., ಶ್ರೀ ಸೀತಾರಾಮ ಆಚಾರ್ಯ ಬೆಳುವಾಯಿ ಮತ್ತು ಶ್ರೀ ಜಗದೀಶ್ ಜೆ. ಉಡುಪಿ, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ಜಯಶ್ರೀ ಎಸ್.ವಿ. ಆಚಾರ್ ಮತ್ತು ಶ್ರೀಮತಿ ಶಕುಂತಳಾ ಬಿ. ರಾವ್, ಹಿಂದುಳಿದ ವರ್ಗ ‘ಎ’ ಕ್ಷೇತ್ರದಿಂದ ಶ್ರೀ ರಾಜೇಶ್ ನೆತ್ತರ ಮತ್ತು ಹಿಂದುಳಿದ ವರ್ಗ ‘ಬಿ’ ಕ್ಷೇತ್ರದಿಂದ ಶ್ರೀ ಗುರುಪ್ರಸಾದ್ ಶೆಟ್ಟಿ ಬಿ., ವಕೀಲರು, ಚುನಾಯಿತರಾಗಿರುತ್ತಾರೆ.
ಚುನಾವಣಾಧಿಕಾರಿಗಳಾಗಿ ಶ್ರೀ ಹೆಚ್.ಎನ್. ರಮೇಶ್, ವಸೂಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಮಂಗಳೂರು ಇವರು ಕರ್ತವ್ಯ ನಿರ್ವಹಿಸಿದ್ದರು.