ಕನ್ನಡ ವಾರ್ತೆಗಳು

ಇಸ್ಕಾನ್ ಶ್ರೀ ಕೃಷ್ಣ – ಬಲರಾಮ ರಥಯಾತ್ರೆಗೆ ಚಾಲನೆ

Pinterest LinkedIn Tumblr

Iskcon_Ratha_Yatre_1

ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ನಗರದ ಶಾಖೆಯ ಆಶ್ರಯದಲ್ಲಿ 12ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವವು ತಾ| 21.02.2015ರಂದು ನಗರದ ಡಾ| ಟಿ.ಎಂ.ಎ. ಪೈ ಸಭಾಂಗಣದಲ್ಲಿ ಸಂಭ್ರಮ ಮತ್ತು ಸಡಗರದಿಂದ ಜರಗಿತು. ಶ್ರೀ ಕೃಷ್ಣ ಬಲರಾಮರ ವಿಶೇಷ ಮಹಾಪೂಜೆಯ ಬಳಿಕ ಸಾಂಕೇತಿಕವಾಗಿ ರಥಯಾತ್ರೆಗೆ ಚಾಲನೆ ನೀಡಲಾಯಿತು.

Iskcon_Ratha_Yatre_2

ಇಸ್ಕಾನ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀಮಾನ್ ಮಧು ಪಂಡಿತ ದಾಸರು ಸಮಾರಂಭದ ಅಧ್ಯಕ್ಷತೆ ವಹಿಸಿ, ಶ್ರದ್ಧೆ, ಭಕ್ತಿ-ಭಾವ, ಆಚಾರ-ವಿಚಾರಗಳನ್ನು ಇಂದಿನ ಜನತೆ ಮೈಗೂಡಿಸಿಕೊಳ್ಳಲು ಇಂತಹ ಉತ್ಸವಗಳು ಪ್ರೇರಣೆಯಾಗಲಿವೆ ಎಂದು ನುಡಿದರು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಸದಾನಂದ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಕ್ತಾಭಿಮಾನಿಗಳಿಗೆ ಭಗವಂತನ ಕೃಪೆ ಮತ್ತು ಅನುಗ್ರಹ ಸದಾ ಇರಲಿ ಎಂದು ಆಶಯ ವ್ಯಕ್ತಪಡಿಸಿದರು. ಗೌರವ ಅತಿಥಿಗಳಾಗಿ ಖ್ಯಾತ ನ್ಯಾಯಾವಾದಿ ಶ್ರೀ ಎಂ.ಆರ್. ಬಳ್ಳಾಲ್‌ರವರು ಭಾಗವಹಿಸಿದ್ದರು. ದಿಯಾ ಸಿಸ್ಟಮ್ಸ್ ಅಧ್ಯಕ್ಷ ಡಾ| ರವಿಚಂದ್ರ ರಾವ್ ಅಗಾಧ ಮೊತ್ತವನ್ನು ದಾನದ ರೂಪದಲ್ಲಿ ನೀಡುವುದಾಗಿ ಆಶ್ವಾಸನೆ ನೀಡಿದರು. ಶ್ರೀ ರಾಜೀವ್ ಲೋಚನ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರದ ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಶ್ರೀ ಕಾರುಣ್ಯ ಸಾಗರ ದಾಸ ಕಾರ್ಯಕ್ರಮವನ್ನು ಸಂಘಟಿಸಿದ್ದರು.

Iskcon_Ratha_Yatre_3 Iskcon_Ratha_Yatre_4 Iskcon_Ratha_Yatre_5 Iskcon_Ratha_Yatre_6 Iskcon_Ratha_Yatre_7 Iskcon_Ratha_Yatre_8 Iskcon_Ratha_Yatre_9 Iskcon_Ratha_Yatre_10 Iskcon_Ratha_Yatre_11 Iskcon_Ratha_Yatre_12 Iskcon_Ratha_Yatre_13 Iskcon_Ratha_Yatre_14 Iskcon_Ratha_Yatre_15 Iskcon_Ratha_Yatre_16 Iskcon_Ratha_Yatre_17 Iskcon_Ratha_Yatre_18 Iskcon_Ratha_Yatre_20 Iskcon_Ratha_Yatre_21 Iskcon_Ratha_Yatre_22 Iskcon_Ratha_Yatre_23 Iskcon_Ratha_Yatre_24 Iskcon_Ratha_Yatre_25 Iskcon_Ratha_Yatre_26 Iskcon_Ratha_Yatre_27 Iskcon_Ratha_Yatre_29 Iskcon_Ratha_Yatre_31 Iskcon_Ratha_Yatre_32 Iskcon_Ratha_Yatre_33 Iskcon_Ratha_Yatre_34 Iskcon_Ratha_Yatre_35 Iskcon_Ratha_Yatre_36 Iskcon_Ratha_Yatre_37 Iskcon_Ratha_Yatre_38 Iskcon_Ratha_Yatre_39 Iskcon_Ratha_Yatre_40 Iskcon_Ratha_Yatre_41

ಶ್ರೀ ಶ್ರೀ ಕೃಷ್ಣ ಬಲರಾಮರ ವಿಗ್ರಹ/ಮೂರ್ತಿಗಳನ್ನು ಹೊತ್ತ ವೈವಿಧ್ಯಮಯ ಪುಷ್ಪಗಳಿಂದ ಮತ್ತು ವಿಧ್ಯುನ್ಮಾನ ಅಲಂಕೃತಗೊಂಡ ಭವ್ಯ ರಥಯಾತ್ರಾ ಮೆರವಣಿಗೆಯನ್ನು ಭಕ್ತಾಭಿಮಾನಿಗಳು, ಅನುಯಾಯಿಗಳು ಶೃದ್ಧಾ-ಭಕ್ತಾಭಿಮಾನದಿಂದ ‘ಹರೇ ಕೃಷ್ಣ ಹರೇ ರಾಮ’ ಜಪದೊಂದಿಗೆ ಭಜನೆ-ಸಂಕೀರ್ತನೆ-ನೃತ್ಯ-ವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಯುದ್ದಕ್ಕೂ ಎಳೆದು ಸಾಗಿಸಲಾಯಿತು. ಭಕ್ತಾಧಿಗಳು/ಸಾರ್ವಜನಿಕರು ಹರ್ಷೋದ್ದಾರ ಮತ್ತು ಸಂಭ್ರಮದಿಂದ ಈ ಮೆರವಣಿಗೆಯಲ್ಲಿ ಭಾಗವಹಿಸಿ, ಶೋಭಾಯಾತ್ರೆಯುದ್ದಕ್ಕೂ ಫಲ-ಪುಷ್ಪ ಮಂಗಳಾರತಿಯನ್ನು ಶ್ರೀ ಕೃಷ್ಣ ಬಲರಾಮ ಪರಮಾತ್ಮರಿಗೆ ಅರ್ಪಿಸಿದರು.

Write A Comment