ಕನ್ನಡ ವಾರ್ತೆಗಳು

ಭೂಗತ ಪಾತಕಿ ಬನ್ನಂಜೆ ರಾಜನನ್ನು ಭಾರತಕ್ಕೆ ಕರೆತರಲು ಮಂಗಳೂರು ಕಮಿಷನರ್ ವಿಭಾಗ ಸಿದ್ಧತೆ

Pinterest LinkedIn Tumblr

bannajje_raja_arreste

ಮಂಗಳೂರು,ಫೆ.13 : ಮೊರೆಕ್ಕೋದಲ್ಲಿ ಬಂಧಿತ ಭೂಗತ ಪಾತಕಿ ಬನ್ನಂಜೆ ರಾಜನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಆರಂಭವಾಗಿದ್ದು, ಆತನಿಗೆ ಸಂಬಂಧಿಸಿದ ಪ್ರಕರಣಗಳ ವಿವರಗಳನ್ನು ಮಂಗಳೂರು ಪೊಲೀಸರು ಸರಕಾರಕ್ಕೆ ಗುರುವಾರ ಸಲ್ಲಿಸಿದ್ದಾರೆ.

ವಿವರಗಳನ್ನು ಭಾರತ ಸರಕಾರ ಮೂಲಕ ಮೊರೆಕ್ಕೋಗೆ ಕಳುಹಿಸಬೇಕಾಗಿದೆ. ಮೊದಲು ಬಂಧಿತ ವ್ಯಕ್ತಿ ಬನ್ನಂಜೆ ರಾಜ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ಫೋಟೋ ಮತ್ತು ವಿವರಗಳನ್ನು ಸಲ್ಲಿಸಲಾಗಿದೆ. ಬಂಧಿತ ಬನ್ನಂಜೆ ರಾಜನೇ ಎಂದು ಖಚಿತವಾದ ಬಳಿಕ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

ಶೀಘ್ರದಲ್ಲಿ ರಾಜಾನು ಭಾರತಕ್ಕೆ ಹಸ್ತಾಂತರವಾದರೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ನಿಟ್ಟಿನಲ್ಲಿ ಮಂಗಳೂರು ಕಮಿಷನರ್ ವಿಭಾಗ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಕಮಿಷನರ್ ನೇತೃತ್ವದಲ್ಲಿ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Write A Comment