ಶ್ರವಣಬೆಳಗೊಳ,ಫೆ.03 : ಹಾಸನ ಸಮೀಪದ ಶ್ರವಣಬೆಳಗೊಳದಲ್ಲಿ ಜನವರಿ 31 ರಿಂದ ಫೆಬ್ರಬರಿ 3 ರವರೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ದುಬಾಯಿಯ ಸಾಧಕ ಪ್ರಕಾಶ್ ರಾವ್ ಪಯ್ಯಾರ್ ಅವರನ್ನು ಸನ್ಮಾನಿಸಲಾಯಿತು.
ದುಬಾಯಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಸಾಮಾಜಿಕ ಸಾಹಿತ್ಯಕ ಚಟುವಟಿಕೆಗಳಲ್ಲಿ ಮಾಡಿದ ಸೇವೆಗಾಗಿ ಅವರನ್ನು ವಿದೇಶದಲ್ಲಿ ನೆಲೆಸಿರುವ ಕನ್ನಡಿಗ ಸಾಧಕನ ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರು ಮತ್ತಿತರರು ಸನ್ಮಾನಿಸಿದರು.
ಮಾಜಿ ಮುಖ್ಯ ಮಂತ್ರಿ ಯಡ್ಯೂರಪ್ಪ, ಸಾಹಿತಿ ಸಿದ್ಧರಾಮಯ್ಯ, ಶಾಸಕ ಬಾಲಕೃಷ್ಣ, ಪುಂಡಲೀಕ ಹಾಲಂಬಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ ವರದಿ: ಶೇಖರ ಅಜೆಕಾರು