ಮಂಗಳೂರು : ಪಣಂಬೂರು ಕಸ್ಟಮ್ಸ್ ಕಚೇರಿಯಲ್ಲಿ ಮುಖ್ಯ ಲೆಕ್ಕಾಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕೆ.ಶೇಖ್ ಅಬ್ದುಲ್ ಕರೀಂ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಕೋಟೆಕಾರ್ ಮೂಲದ ಅಬ್ದುಲ್ ಕರೀಮ್ರವರು 1973ರಲ್ಲಿ ಕಸ್ಟಮ್ಸ್ನಲ್ಲಿ ಸೇವೆಗೆ ಸೇರಿದ್ದು, ಅವರ ಸೇವಾ ಅವಯ ದಕ್ಷತೆಯನ್ನು ಗುರುತಿಸಿ ರಾಷ್ಟ್ರಪತಿ ಪದಕದಿಂದ ಗೌರವಿಸಲಾಗುತ್ತಿದೆ. ಅಬ್ದುಲ್ ಕರೀಂರವರು ತಮ್ಮ ಕರ್ತವ್ಯದ ನಡುವೆಯೂ ಕ್ರೀಡಾ ಸೇವೆಯಲ್ಲೂ ನಿರತರಾಗಿದ್ದಾರೆ. ಹಲವು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ.