ಕನ್ನಡ ವಾರ್ತೆಗಳು

ಬಂಟರ ಸಂಘದ ಉನ್ನತ ಶಿಕ್ಷಣ ಕಾಲೇಜು ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

Pinterest LinkedIn Tumblr

mumbai_student_photo_1

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ಬಂಟರ ಸಂಘದ ಶಶಿ ಮನಮೋಹನ್ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದಲ್ಲಿರುವ ಅಣ್ಣಲೀಲಾ ಕಾಲೇಜ್ ಆಪ್ ಕಾರ್ಮಸ್ ಮತ್ತು ಇಕಾನಾಮಿಕ್ಸ್, ಶೊಭಾ ಜಯರಾಮ ಶೆಟ್ಟಿ ಕಾಲೇಜ್ ಫಾರ್ ಬಿ.ಎಂ.ಎಸ್. ರಮಾನಾಥ ಪಯ್ಯಡೆ ಕಾಲೇಲ್ ಆಫ್ ಹಾಸ್ಪಿಟಾಲಿಟಿ ಮೆನೇಜ್ ಮೆಂಟ್ ಕಾಲೇಜ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವು ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿತು.

mumbai_student_photo_2

ಮುಖ್ಯ ಅತಿಥಿಯಾಗಿ ಸ್ಥಳೀಯ ರಾಜಕಾರಿಣಿ ಸುನೀಲ್ ರಾಯ್ಕರ್ ಉಪಸ್ಥಿತರಿದ್ದು ಅವರನ್ನು ಪ್ರಾಂಶುಪಾಲ ಡಾ. ಕೆ. ಎಸ್. ಚೀಮಾ ಗೌರವಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಬದುಕಿನ ಕನಸನ್ನು ನೆನಸಾಗಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕಾಗಿದೆ ಎಂದರು.

ಪದವಿ ಪ್ರದಾನ ಸಮಾರಂಭವನ್ನು ಬಂಟರ ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿಯವರು ಉದ್ಘಾಟಿಸಿದರು. ವಿವಿಧ ಪದವಿ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

mumbai_student_photo_3

ಅಣ್ಣಯ್ಯ ಶೆಟ್ಟಿ, ಗೌರವ್ ಪಯ್ಯಡೆ, ಲತಾ ಜೆ. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಸಂಘದ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಬಿ. ಆರ್. ಶೆಟ್ಟಿ, ಸಿಎ ಸತೀಶ್ ಶೆಟ್ಟಿ, ಸಿಎ ಹರೀಶ್ ಹೆಗ್ಡೆ, ಉಮಾ ಕೃಷ್ಣ ಶೆಟ್ಟಿ,ಡಾ, ಕೃಷ್ಣ ಶೆಟ್ಟಿ, ಸಂಯೋಗಿತಾ ಮೊರಾರ್ಜಿ ಮೊದಲಾದವರು ಉಪಸ್ಥಿತರಿದ್ದರು.

Write A Comment