ಸಿನಿ ಸುದ್ದಿ , ಜ.24 : ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ತ್ರಿಷಾ ಕೃಷ್ಣನ್ ಅವರ ನಿಶ್ಚಿತಾರ್ಥ ಉದ್ಯಮಿ ಮತ್ತು ಚಿತ್ರ ನಿರ್ಮಾಪಕ ವರುಣ್ ಮಣಿಯನ್ ಅವರೊಂದಿಗೆ ಶುಕ್ರವಾರ ಬೆಳಿಗ್ಗೆ ನಿಶ್ಚಿತಾರ್ಥವು ವಿಜೃಂಭಣೆಯಿಂದ ನೆರವೇರಿತು. . ತ್ರಿಷಾಗೆ ತಕ್ಕಂತೆ ಸುರಸುಂದರಾಂಗನಾಗಿರುವ ವರುಣ್ ಮತ್ತು ಕನ್ನಡದ ‘ಪವರ್’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿರುವ ತ್ರಿಷಾ ಕೃಷ್ಣನ್ ಹಲವಾರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.
ಸಂಪ್ರದಾಯದಂತೆ ವರುಣ್ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ನೆರವೇರಿದ್ದು, ಇದೇ ವರ್ಷದ ಕೊನೆಯಲ್ಲಿ ವರುಣ್ ಅವರು ತ್ರಿಷಾಗೆ ಮಂಗಳಸೂತ್ರ ಕಟ್ಟಲಿದ್ದಾರೆ. ತ್ರಿಷಾ ಕೃಷ್ಣನ್ ನಿಶ್ಚಿತಾರ್ಥಕ್ಕೆ ದಕ್ಷಿಣ ಭಾರತದ ಗಣ್ಯರ ದಂಡೇ ಆಗಮಿಸಿತ್ತು. ಕಮಲ್ ಹಾಸನ್, ಗೌತಮಿ, ರಮ್ಯಾ ಕೃಷ್ಣನ್, ಮಣಿರತ್ನಂ, ಸುಹಾಸಿನಿ ಮಣಿರತ್ನಂ, ಶಿವಾಜಿ ಪ್ರಭು, ವಿಕ್ರಂ ಪ್ರಭು, ಅಮಲಾ ಪೌಲ್ ಮತ್ತು ಸ್ನೇಹಿತರು ಆಗಮಿಸಿ ಜೋಡಿಗೆ ಶುಭ ಹಾರೈಸಿದರು. ಖ್ಯಾತ ಹಿನ್ನೆಲೆ ಗಾಯಕಿ ವಿನಯಾ ಅವರು ಹಾಡಿ ನೆರೆದವರನ್ನು ರಂಜಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತ್ತು